Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಜೆಪಿ ಕಾಂಗ್ರೆಸ್ ವಿರುದ್ದ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ

Facebook
Twitter
Telegram
WhatsApp

ಬೆಂಗಳೂರು: ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತ ಈಗೇನೋ ಮಾಡ್ತಿದ್ದಾರೆ ಕಾಂಗ್ರೆಸ್ ನವರು.ಬಳ್ಳಾರಿಯಿಂದ ಬಂದ್ರಲ್ಲಪ್ಪ ಸಿದ್ದರಾಮಯ್ಯನವರೇ, ಐದು ವರ್ಷ ನೀವೇ ಇದ್ರಲ್ಲ… ಅಷ್ಟೂ ವರ್ಷದಲ್ಲಿ ಏನು ಕೊಟ್ಟಿರಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 18 ಸಾವಿರ ಕೋಟಿ ಎಸ್ಟಿಮೇಟ್ ಮಾಡಿ ಈಗ ಎಷ್ಟಾಗಿದೆ? ಕಾಂಗ್ರೆಸ್ ನವರ ಡಬಲ್ ಸ್ಟ್ಯಾಂಡರ್ಡ್ ಇದು ಎಂದು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.

ಎರಡೂ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಗುತ್ತಿಗೆ ತೆಗೆದುಕೊಂಡಿಲ್ಲ, ಅವರ ಜೇಬು ತುಂಬಿಸಿಕೊಳ್ಳೋ ಗುತ್ತಿಗೆ ತೆಗೆದುಕೊಂಡಿದ್ದಾರೆ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡೋದು ನಿಲ್ಲಿಸಿ ಮೊದಲು. ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ನಾಲ್ಕು ಸೀಟುಗೆದ್ದಿದ್ದೇವೆ ಎಂದು ತಿರುಗೇಟು ನೀಡಿದರು.

ನನ್ನ ತಲೆಯಲ್ಲಿ ಇನ್ನೂ ಒಂದೆರಡು ಕೂದಲು ಉಳಿಸ್ಕೊಂಡಿದ್ದೀನಿ. ದಿನಕ್ಕೆ ಒಬ್ಬರು ನಮ್ಮ ಮನೆಗೆ ಬರ್ತೀರಾ.. ಬಿಜೆಪಿ-ಕಾಂಗ್ರೆಸ್ ದೊಣ್ಣೆ ನಾಯಕರ ಕೇಳಿ ನಾನು ಕ್ಯಾಂಡಿಡೇಟ್ ಹಾಕಬೇಕಾ? ಮುಸ್ಲಿಂ ಕ್ಯಾಂಡಿಡೇಟ್ ಹಾಕಿದ್ರೆ ಬಿಜೆಪಿಗೆ ಅನುಕೂಲ ಆಗಲಿ ಅಂತ ಹಾಕಿದ್ದೇನೆ ಅನ್ನೋದು, ಓಬಿಸಿ ಹಾಕಿದ್ರೆ ಕಾಂಗ್ರೆಸ್ ಮುಗಿಸೋಕೆ ಹಾಕಿದ್ದೇನೆ ಅನ್ನೋದು, ಲಿಂಗಾಯತ ಕ್ಯಾಂಡಿಡೇಟ್ ಹಾಕಿದ್ರೆ ಬಿಜೆಪಿ ಮುಗಿಸೋಕೆ ಹಾಕಿದಿನಿ ಅನ್ನೋದು. ನನ್ನ ಪಕ್ಷದಲ್ಲಿ ನಾನು ಯಾರು ಬೇಕನ್ನಾದ್ರೂ ಕ್ಯಾಂಡಿಡೇಟ್ ಹಾಕ್ತೀನಿ ಎಂದು ಕಾಂಗ್ರೆಸ್​​, ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಬಿ ಟೀಂ ಅಂತ ಬೊಗಳಿದವರು ನಮ್ಮ ಮನೆಗೆ ಸರ್ಕಾರ ನಡೆಸೋಣ ಅಂತ ನೀವೇ ಬಂದ್ರಲ್ಲ.. ಅಧಿಕಾರ ಕೊಟ್ಟ ಮೇಲೆ ನೆಟ್ಟಗೆ ನಡೆಸೋಕಾದ್ರೂ ಬಿಟ್ಟರಾ? ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಕೂತ್ಕೊಂಡು ಕುಮಾರಸ್ವಾಮಿ ಸಿಎಂ ಆದ್ರೆ ನಮಗೇನು ಲಾಭ ಅಂದ್ರು. ಈಗ ಬಿಜೆಪಿ ಸರ್ಕಾರ ದರಿದ್ರ ಸರ್ಕಾರ ಅಂತಾರೆ ಎಂದು ಲೇವಡಿ ಮಾಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ದಾಂಪತ್ಯ ಜೀವನ ಇದ್ದಕ್ಕಿದ್ದಂತೆ ಬಿರುಕು ಏಕೆ?

ಈ ರಾಶಿಯವರ ದಾಂಪತ್ಯ ಜೀವನ ಇದ್ದಕ್ಕಿದ್ದಂತೆ ಬಿರುಕು ಏಕೆ? ಈ ಪಂಚರಾಶಿಗಳ ಮದುವೆ ಸಾಲಾವಳಿ ಕೇಳುವ ಸಮಯ ಬಂದಿದೆ, ಗುರುವಾರ ರಾಶಿ ಭವಿಷ್ಯ -ಮೇ-16,2024 ಸೀತಾ ನವಮಿ ಸೂರ್ಯೋದಯ: 05:47, ಸೂರ್ಯಾಸ್ತ : 06:37

ನೇಹಾ ಕೊಲೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ : ನೇಹಾ ತಂದೆ ನಿರಂಜನ ಹಿರೇಮಠ ಆಕ್ರೋಶ

ಹುಬ್ಬಳ್ಳಿ: ಪ್ರೀತಿ ವಿಚಾರಕ್ಕೆ ಬಾಳಿ ಬದುಕಬೇಕಿದ್ದ, ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ನೇಹಾಳನ್ನು ಕ್ರೂರವಾಗಿ ಕೊಂದಿದ್ದಾನೆ ಫಯಾಜ್. ಆದರೆ ಇನ್ನು ಆ ನೋವು ಯಾರಲ್ಲಿಯೂ ಕಡಿಮೆಯಾಗಿಲ್ಲ, ಆ ಘಟನೆ ಇನ್ನು ಕಣ್ಣಿಗೆ ಕಟ್ಟಿದಂತೆಯೆ ಇದೆ. ಹೀಗಿರುವಾಗ

ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಮಹಿಳಾ ಅಧ್ಯಕ್ಷೆ ಆರತಿ ಚಿತ್ರದುರ್ಗ ನಗರಕ್ಕೆ ಭೇಟಿ ಯೋಗ, ಪ್ರಾಣಾಯಾಮ ಕುರಿತು ಮಾಹಿತಿ

ಚಿತ್ರದುರ್ಗ: ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಮಹಿಳಾ ಅಧ್ಯಕ್ಷರಾದ ಆರತಿ ಮತ್ತು ವಿಭಾಗೀಯ ಮಟ್ಟದ ಪದಾಧಿಕಾರಿ ಜ್ಯೋತಿ ಅವರು ಚಿತ್ರದುರ್ಗ ನಗರಕ್ಕೆ ಮಂಗಳವಾರ ಭೇಟಿ ನೀಡಿದರು. ಚಿತ್ರದುರ್ಗ ನಗರದ ಜಿಲ್ಲಾ ಕ್ರೀಡಾಂಗಣದ ರಸ್ತೆಯ

error: Content is protected !!