Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ಸಲ ಕಪ್ ನಮ್ದೆ..ಈ ಸಲ ಫ್ಯಾನ್ಸ್ ಮಾತ್ರ ಅಲ್ಲ ಫ್ರಾಂಚೈಸಿ ಮಾಲೀಕರು ಹೇಳ್ತಿದ್ದಾರೆ ಯಾಕೆ ಗೊತ್ತಾ..?

Facebook
Twitter
Telegram
WhatsApp

15 ನೇ ಆವೃತ್ತಿಯ ಐಪಿಎಲ್ ಮ್ಯಾಚ್ ಗೆ ಕ್ಷಣಗಣನೆ ಶುರುವಾಗಿದೆ. ತಮ್ಮಿಷ್ಟದ ಪಂದ್ಯಗಳನ್ನ ನೋಡಲು ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ. ಹಾಗೇ ತಮ್ಮಿಷ್ಟದ ಟೀಂ ಸಪೋರ್ಟ್ ಗೂ ಹಿಂದೆ ಬಿದ್ದಿಲ್ಲ. ಪ್ರತಿ ಸಲ ಹೆಚ್ಚು ಸೌಂಡ್ ಮಾಡೋದು ಆರ್ ಸಿ ಬಿ ಫ್ಯಾನ್ಸ್ ಗಳೇ. ಪ್ರತಿಸಲ ಈ ಸಲ ಕಪ್ ನಮ್ದೆ ಎಂದಾಗಲೂ ಅದ್ಯಾಕೋ ಆರ್ಸಿಬಿ ಟೀಂ ಮಾತ್ರ ಅಭಿಮಾನಿಗಳ ಆಸೆಯನ್ನ ಈಡೇರಿಸಿಲ್ಲ. ಆದ್ರೆ ಈ ಬಾರಿ ಮಾತ್ರ ಕಪ್ ನಮ್ದೇ ಆಗುತ್ತೆ ಅನ್ನೋ ಗಾಢವಾದ ನಂಬಿಕೆ ಹುಟ್ಟಿಕೊಂಡಿದೆ.

ಪ್ರತಿಸಲ ಆರ್ಸಿಬಿ ಫ್ಯಾನ್ಸ್ ಮಾತ್ರ ಈ ಬಗ್ಗೆ ಕೂಗಿ ಕೂಗಿ ಹೇಳ್ತಾ ಇದ್ರು. ಆದ್ರೆ ಈ ಸಲ ಫ್ರಾಂಚೈಸಿ ಮಾಲೀಕರೇ ಹೇಳ್ತಿದ್ದಾರೆ ಅಂದ್ರೆ ಅರ್ಥ ಮಾಡ್ಕೊಳಿ. ಮ್ಯಾಚ್ ಹೇಗಿರಬೇಡ. ಅದಕ್ಕೆ ಕಾರಣವೂ ಹಲವಿದೆ. ಈ ಬಾರಿ ಆರ್ಸಿಬಿ 3+1 ಫಾರ್ಮೂಲ ಉಪಯೋಗಕ್ಕೆ ನಿಂತಿದೆ. ಅದೇನಂದ್ರೆ.

ವಿರಾಟ್ ಕೊಹ್ಲಿ ಈ ಬಾರಿ ನಾಯಕತ್ವದ ಹೊರೆಯಿಂದ ಕೆಳಗಿಳಿದಿದ್ದಾರೆ. ಹೀಗಾಗಿ ಒತ್ತಡ ಕಡಿಮೆ ಇರುತ್ತೆ. ಆಟದ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಜೊತೆಗೆ ಇತ್ತೀಚೆಗೆ ನಡೆದ ಕೆಲವೊಂದು ಘಟನೆಗಳು ಅವರಿಗೆ ಬೇಸರವನ್ನು ತರಿಸಿರುವುದರಿಂದ ಈ ಬಾರಿ ಆಟದಲ್ಲೇ ಅವರ ಸಾಮರ್ಥ್ಯ ತೋರಿಸಲಿದ್ದಾರೆ. ಹೀಗಾಗಿ ಹೆಚ್ಚು ಲಾಭ ಸಿಗುವ ನಿರೀಕ್ಷೆ ಇದೆ.

ಇನ್ನು ಈ ಬಾರಿ ಎಬಿಡಿ ತಂಡದಲ್ಲಿ ಇರೋಲ್ಲ. ಇದೊಂದು ಆತಂಕವೂ ಸರಿ. ಆದರೂ ಅವರ ಸ್ಥಾನವನ್ನು ಮ್ಯಾಕ್ಸ್ ವೆಲ್ ತುಂಬ್ತಾರೆ ಅನ್ನೊ ನಂಬಿಕೆ ಫ್ರಾಂಚೈಸಿಗಳಲ್ಲಿದೆ. ಒಟ್ಟಾರೆ ಈ ಬಾರಿ ಕಪ್ ನಮ್ದೆ ಅನ್ನೊದನ್ನಯ ಇನ್ನು ಗಟ್ಟಿಯಾಗಿ ಹೇಳಲು ರೆಡಿಯಾಗಿದ್ದಾರೆ. ಫ್ರಾಂಚೈಸಿಗಳ ಈ ಜೋಶ್ ಅಭಿಮಾನಿಗಳಿಗೆ ಮತ್ತಷ್ಟು ಕ್ರೇಜ್ ಕೊಟ್ಟಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಎಸ್ಟಿ ವಿಭಾಗದ ಅಧ್ಯಕ್ಷ ಬಿ.ಮಂಜುನಾಥ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್,ಚಿತ್ರದುರ್ಗ, ಜುಲೈ. 07 : ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಮಂಜುನಾಥ್ ಲೋಕೋಪಯೋಗಿ ಸಚಿವ ಸತೀಶ್‍ಜಾರಕಿಹೊಳಿರವರ

ರಾಜಕೀಯದಲ್ಲಿ ಮುಸ್ಲಿಂ ಸಮಾಜಕ್ಕೆ ಅಧಿಕಾರವಿಲ್ಲ, ಆದ್ಯತೆಯಿಲ್ಲ, ಮುಸ್ಲಿಮರು ಕೇವಲ ಮತ ನೀಡುವುದಕ್ಕಷ್ಟೆ ಸೀಮಿತ : ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್,ಚಿತ್ರದುರ್ಗ, ಜುಲೈ. 07 : ಶಿಕ್ಷಣದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಸಾಧನೆ ಮಾಡಿರುವವರನ್ನು ಗುರುತಿಸಿ ಸನ್ಮಾನಿಸಿದರೆ ಇತರೆಯವರಿಗೆ ಪ್ರೇರಣೆಯಾಗುತ್ತದೆಂದು

Kamala Harris: ಅಮೇರಿಕಾ ಅಧ್ಯಕ್ಷ ಸ್ಥಾನದ ಸನಿಹದಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್..!

ಸುದ್ದಿಒನ್ : ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಕಾವು ಜೋರಾಗಿದೆ. ಅಧ್ಯಕ್ಷೀಯ ರೇಸ್‌ಗೆ ಅಂತಿಮವಾಗಿ ಯಾರು ನಿಲ್ಲುತ್ತಾರೆ ಮತ್ತು ಯಾರು ಯಾರನ್ನು ಎದುರಿಸುತ್ತಾರೆ ಎಂಬ ವಿಷಯ ತೀವ್ರ ಕುತೂಹಲ ಮೂಡಿಸಿದೆ. ಪ್ರಸ್ತುತ ಡೆಮಾಕ್ರಟಿಕ್

error: Content is protected !!