Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಿಕೆಶಿ ಜೊತೆಗೆ ವಿ ಸೋಮಣ್ಣ ಫೋಟೋ ವೈರಲ್ : ಸಿಎಂ ಸಂಧಾನ ಯಶಸ್ವಿಯಾಗಲಿಲ್ಲವಾ..?

Facebook
Twitter
Telegram
WhatsApp

 

ಬೆಂಗಳೂರು: ಎಲ್ಲ ಪಕ್ಷದಲ್ಲೂ ವೈಯಕ್ತಿಕ ಭಿನ್ನಾಭಿಪ್ರಾಯ, ಮನಸ್ತಾಪ ಇರುವುದು ಕಾಮನ್. ಚುನಾವಣೆ ಹತ್ತಿರವಾಗುವಾಗ ಭಿನ್ನಾಭಿಪ್ರಾಯದಿಂದಾನೇ ಪಕ್ಷ ಬದಲಾವಣೆ ಕೂಡ ನಡೆಯಲಿದೆ. ಈಗ ಬಿಜೆಪಿಯ ಸಚಿವ ಸೋಮಣ್ಣ ವಿಚಾರ ಚರ್ಚೆಯಲ್ಲಿದೆ.

ಹಲವು ತಿಂಗಳಿನಿಂದ ಸಚಿವ ಸೋಮಣ್ಣ, ಬಿಜೆಪಿ ನಡವಳಿಕೆಗೆ ಬೇಸತ್ತಿದ್ದಾರೆ. ಅದಾಗಲೇ ಅವ್ರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆದಿದೆ ಎಂಬೆಲ್ಲಾ ವಿಚಾರ ಜೋರಾಗಿತ್ತು. ಇದರ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಮಾಧಾನ ಮಾಡುವ ಪ್ರಯತ್ನ ನಡೆಸಿದ್ದರು. ಅಸಾಮಧಾನವನ್ನು ಅಳಿಸುವ ಪ್ರಯತ್ನಕ್ಕೆ ಕಾರಣವಾಗಿತ್ತು. ಆದರ ಸಿಎಂ ಬೊಮ್ಮಾಯಿ ಅವರ ಸಂಧಾನ ಸಭೆ ಸಫಲವಾಗಿರುವುದು ಅಷ್ಟಾಗಿ ಕಾಣಿಸುತ್ತಿಲ್ಲ. ಯಾಕಂದ್ರೆ ಇಂದು ಸಚಿವ ಸೋಮಣ್ಣ ಅವರಿಗೆ ಸಂಬಂಧಪಟ್ಟಂತ ಫೋಟೋವೊಂದು ವೈರಲ್ ಆಗ್ತಾ ಇದೆ.

ಫ್ಲೈಟ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜೊತೆಗೆ ವಿ ಸೋಮಣ್ಣ ಇರುವಂತ ಫೋಟೋವಿದು. ಕಾಂಗ್ರೆಸ್ ಸೇರುವ ವಿಚಾರವನ್ನು ಇಲ್ಲಿಯೇ ಚರ್ಚೆ ನಡೆಸಿದ್ರಾ ಎಂಬೆಲ್ಲಾ ಚರ್ಚೆಗಳು ಆರಂಭವಾಗಿದೆ. ಸಚಿವ ಸೋಮಣ್ಣ ಅವರು ಮಧ್ಯಾಹ್ನ ಸುದ್ದಿಗೋಷ್ಟಿ ಕರೆದಿದ್ದಾರೆ. ಇಲಾಖೆಗೆ ಸಂಬಂಧಪಟ್ಟಂತೆ ಮಾತನಾಡುವ ಸಾಧ್ಯತೆ ಜೊತೆಗೆ ಡಿಕೆಶಿ ಜೊತೆಗಿನ ಫೋಟೋ ಬಗ್ಗೆಯೂ ಕ್ಲಾರಿಟಿ ಕೊಡಬಹುದು ಎಂದು ಊಹಿಸಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆ | ರೈತ ಆತ್ಮಹತ್ಯೆ

ಸುದ್ದಿಒನ್, ಚಳ್ಳಕೆರೆ, ಮೇ. 12 : ತಾಲೂಕಿನ ಬಾಲೇನಹಳ್ಳಿ ಗ್ರಾಮದ ಮೋಹನ್ ಕುಮಾರ್(36) ಎಂಬ ರೈತ ಬೆಳಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ಭಾನುವಾರ ಬೆಳಗಿನ ಜಾವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ

ಹೊಸದುರ್ಗ | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್,‌ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

  ಸುದ್ದಿಒನ್, ಚಿತ್ರದುರ್ಗ, ಮೇ. 12  : ಇತ್ತಿಚೀಗಷ್ಟೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆ 21ನೇ ಸ್ಥಾನ ಪಡೆದುಕೊಂಡಿದೆ. ಇತ್ತ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ

ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವು…!

ಬೆಂಗಳೂರು : ಇಂದು ತಾಯಂದಿರ ದಿನ. ಎಲ್ಲರೂ ತಮ್ಮ ತಾಯಂದಿರ ಫೋಟೋ ಹಾಕಿಕೊಂಡು ವಿಶ್ ಮಾಡುತ್ತಿದ್ದಾರೆ. ತಾಯಂದಿರಿಗೆ ಗಿಫ್ಟ್ ಕೊಟ್ಟು ಸಂಭ್ರಮಿಸುತ್ತಿದ್ದಾರೆ. ಆದರೆ ಈ ನಟಿಯ ಮಕ್ಕಳಿಗೆ ಆ ಯೋಗ ಇಲ್ಲ. ಅಮ್ಮನನ್ನು ತಬ್ಬಿ

error: Content is protected !!