Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪು ಸಮಾಧಿ ದರ್ಶನಕ್ಕೆ ಇಂದಿನಿಂದಲೇ ಅವಕಾಶ : ರಾಘವೇಂದ್ರ ರಾಜ್‍ಕುಮಾರ್

Facebook
Twitter
Telegram
WhatsApp

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನದ ಭಾಗ್ಯ ಅದೆಷ್ಟೋ ಜನ ಅಭಿಮಾನಿಗಳಿಗೆ ಧಕ್ಕಲಿಲ್ಲ. ಅವರ ಸಮಾಧಿಯನ್ನಾದರೂ ನೋಡಬೇಕೆಂಬ ಆತುರ ಸಾಕಷ್ಟು ಅಭಿಮಾನಿಗಳದ್ದು. ಹೀಗಾಗಿ ಅಂತ್ಯಸಂಸ್ಕಾರದ ಬಳಿಕವೂ ಕಂಠೀರವ ಸ್ಟುಡಿಯೋಗೆ ಬಂದು ಅದೆಷ್ಟೊ ಜನ ವಾಪಾಸ್ಸಾಗಿದ್ರು.

ಪುನೀತ್ ಗೆ ಕುಟುಂಬಸ್ಥರಿಂದ ಹಾಲು ತುಪ್ಪ ಕಾರ್ಯಕ್ರಮ ಮುಗಿಯುವವರೆಗೂ ಸಾರ್ವಜನಿಕರಿಗೆ ಅಪ್ಪು ಸಮಾಧಿ ನೋಡಲು ಅನುಮತಿ ಇರಲಿಲ್ಲ. ಹೀಗಾಗಿ ನಿರಾಸೆಯಲ್ಲೇ ವಾಪಾಸ್ ಆಗಿದ್ರು. ಇಂದು ಕುಟುಂಬಸ್ಥರಿಂದ ಹಾಲು ತುಪ್ಪ ಬಿಡೋ ಕಾರ್ಯ ನೆರವೇರಿದೆ. ಇಂದಿನಿಂದ ಸಾರ್ವಜನಿಕರ ದರ್ಶನಕ್ಕೂ ಅನುಮತಿ ನೀಡಲಾಗಿದೆ.

ಹಾಲು ತುಪ್ಪ ಬಿಟ್ಟ ಬಳಿಕ ರಾಘವೇಂದ್ರ ರಾಜ್‍ಕುಮಾರ್ ಮಾತನಾಡಿದ್ದು, ಇವತ್ತು ಐದನೇ ದಿನದ ಹಾಲು ತುಪ್ಪ ಕಾರ್ಯ ಮುಗಿಸಿದ್ದೇವೆ. 11 ನೇ ದಿನದ ಕಾರ್ಯದ ಬಗ್ಗೆ ಹೇಳುತ್ತೇವೆ. ಈ ನೋವಿನೊಂದಿಗೆ ಸದಾ ಬದುಕುತ್ತೇವೆ. ಬೇರೆ ದಾರಿಯೂ ಇಲ್ಲ ಆಯ್ಕೆಗಳು ಇಲ್ಲ ಎಂದು ದುಃಖದಲ್ಲೇ ನುಡಿದಿದ್ದಾರೆ.

ದೇವರು ಅಪ್ಪಾಜಿಗೆ 76 ವರ್ಷ ಕೊಟ್ಟ ಅಪ್ಪುಗೆ 46 ಕೊಟ್ಟ. ಆದರೆ ಅಪ್ಪಾಜಿ ಅಷ್ಟು ವರ್ಷದಲ್ಲಿ ಗಳಿಸಿದ್ದ ಹೆಸರನ್ನ ಅಪ್ಪು 45 ವರ್ಷದಲ್ಲೇ ಗಳಿಸಿದ್ದಾನೆ. ಅಷ್ಟು ಅವಾರ್ಡ್ ಗಳು ಬಂದ್ವು. ಎಷ್ಟು ಜನ ಅಭಿಮಾನಿಗಳನ್ನ ಗಳಿಸಿದ್ದು. ಅವನಿಲ್ಲ ಅನ್ನೋ ನೋವನ್ನ ನಿಮ್ಮ ಮುಂದೆ ನಾವ್ ಯಾವತ್ತು ತೋರಿಸಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅನ್ನ ಮಾಡುವಾಗ ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಗೊತ್ತಾ ?

ಸುದ್ದಿಒನ್ : ನಾವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವ ಪ್ರಮುಖ ಆಹಾರವೆಂದರೆ ಅಕ್ಕಿ. ದೇಶದ ಹೆಚ್ಚಿನ ಭಾಗಗಳಲ್ಲಿ, ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬ್ರೌನ್ ರೈಸ್ ಮತ್ತು

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ.

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ. ಈ ರಾಶಿಯವರು ತುಂಬಾ ದಿವಸದಿಂದ ಪ್ರೀತಿಸುತ್ತಿದ್ದಾರೆ ಆದರೆ ಇವರ ಜೊತೆ ಮದುವೆ ಆಗುತ್ತೋ ಇಲ್ವೋ ಎಂಬ ಅನುಮಾನ, ಭಾನುವಾರ- ರಾಶಿ ಭವಿಷ್ಯ

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

error: Content is protected !!