Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಂಪತ್ ಕುಮಾರ್ ಸಿ.ಡಿ ಅವರಿಗೆ ಚಿತ್ರದುರ್ಗ ತಾಲ್ಲೂಕಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

Facebook
Twitter
Telegram
WhatsApp

ಚಿತ್ರದುರ್ಗ : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯ ಸಿ.ಡಿ ಸಂಪತ್ ಕುಮಾರ್ ಅವರಿಗೆ ಶ್ರೀ ಯೋಗಿ ನಾರೇಯಣ ಯತೀಂದ್ರ ಸಂಸ್ಥೆ ಬೊಮ್ಮೇನಹಳ್ಳಿ ಇವರು 2022-23ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಅಂಗವಾಗಿ ಶಾಲಾ ಆಡಳಿತ ಮಂಡಳಿಯವರಿಂದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಚರಿಸಲಾಯಿತು.

ಶಿಕ್ಷಕರ ದಿನಾಚರಣೆ ಅಂಗವಾಗಿ  ಚಿತ್ರದುರ್ಗ ತಾಲ್ಲೂಕಿನ ಅತ್ಯುತ್ತಮ ಶಿಕ್ಷಕ ಸನ್ಮಾನ ಹಾಗೂ 2021-23 ಸಾಲಿನಲ್ಲಿ ಎಸ್.ಎಸ್.ಎಲ್.ಸಿ  ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಒಂದು  ಕಾರ್ಯಕ್ರಮದಲ್ಲಿ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಸಂಪತ್ ಕುಮಾರ್.ಸಿ.ಡಿ ಇವರಿಗೆ ಚಿತ್ರದುರ್ಗ ತಾಲೂಕಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ನಗದು ನೀಡಿ ಗೌರವಿಸಲಾಯಿತು.

ಅಲ್ಲದೆ ಸಂಪತ್ ಕುಮಾರ್.ಸಿ.ಡಿ ಇವರಿಗೆ ಈ ಹಿಂದೆ 2014-15ರಲ್ಲಿ ಇನ್ನರ್ ವೀಲ್ ರೋಟರಿ ಕ್ಲಬ್, ಚಿತ್ರದುರ್ಗ. ಇವರ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ 2019ರಲ್ಲಿ ವಿಜಯ ಕರ್ನಾಟಕ ಪತ್ರಿಕಾವತಿಯಿಂದ ನೀಡಲಾಗುವ ಜಿಲ್ಲಾ ಉತ್ತಮ ಶಿಕ್ಷಕ  ಪ್ರಶಸ್ತಿಗೆ ಭಾಜನರಾಗಿರುತ್ತಾರೆ.

ತಾಲೂಕಿನ ಅತ್ಯುತ್ತಮ ಶಿಕ್ಷಕ ಸನ್ಮಾನ ಸ್ವೀಕರಿಸಿದ ಸಂಪತ್ ಕುಮಾರ್  ಇವರನ್ನು  ಸಂಸ್ಥೆಯ ಕಾರ್ಯದರ್ಶಿಗಳು ಆಡಳಿತ  ಮಂಡಳಿ ಹಾಗೂ ಶಿಕ್ಷಕ ಶಿಕ್ಷಕರೇತರ ವೃಂದದವರು ಅಭಿನಂದಿರುತ್ತಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಧಾರ್ ಬಳಕೆದಾರರಿಗೆ ಗುಡ್ ನ್ಯೂಸ್ : ಹೊಸ ಅಪ್ಡೇಟ್ : ಕೇಂದ್ರ ಸರ್ಕಾರದ ಪ್ರಮುಖ ನಿರ್ಧಾರ!

ಸುದ್ದಿಒನ್ : ಭಾರತದಾದ್ಯಂತ ಜನರಿಗೆ ಆಧಾರ್ ಕಾರ್ಡ್ ಸಂಬಂಧಿತ ಸೇವೆಗಳನ್ನು ಒದಗಿಸಲು ಸರ್ಕಾರವು ದೇಶಾದ್ಯಂತ ಒಟ್ಟು 13,352 ಆಧಾರ್ ನೋಂದಣಿ ಮತ್ತು ನವೀಕರಣ ಕೇಂದ್ರಗಳನ್ನು ಸ್ಥಾಪಿಸಿದೆ. ಆಧಾರ್ ಕಾರ್ಡ್ ಅನ್ನು ನವೀಕರಿಸುವಲ್ಲಿ ಜನರು ನಿರಂತರವಾಗಿ

ಮೊಟ್ಟೆ ಜಾಸ್ತಿ ತಿಂದರೆ ಏನಾಗುತ್ತೆ ಗೊತ್ತಾ..?

ಸುದ್ದಿಒನ್ | ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನನಿತ್ಯ ಮೊಟ್ಟೆ ತಿಂದರೆ ಪ್ರೊಟೀನ್ ಜೊತೆಗೆ ಹಲವು ಪೋಷಕಾಂಶಗಳು ಸಿಗುತ್ತವೆ. ಅಷ್ಟೇ ಏಕೆ ಮೊಟ್ಟೆಯನ್ನು ನಮ್ಮ ದಿನನಿತ್ಯದ ಆಹಾರದ ಜೊತೆಗೆ ಸೇವಿಸಲು ವೈದ್ಯಕೀಯ ತಜ್ಞರು ಸಲಹೆ

ಈ ರಾಶಿಯವರಿಗೆ ಉದ್ಯೋಗದಲ್ಲಿ ಭಾರಿ ಪೈಪೋಟಿ ಹಾಗೂ ಕಿರುಕುಳ.

ಈ ರಾಶಿಗಳ ಚಂಚಲ ಮನಸ್ಸುಗಳಿಂದ ಮದುವೆ ತಟಸ್ತ. ಈ ರಾಶಿಯವರಿಗೆ ಉದ್ಯೋಗದಲ್ಲಿ ಭಾರಿ ಪೈಪೋಟಿ ಹಾಗೂ ಕಿರುಕುಳ. ಸೋಮವಾರ ರಾಶಿ ಭವಿಷ್ಯ -ಅಕ್ಟೋಬರ್-28,2024 ಗೋವತ್ಸ ದ್ವಾದಶೀ, ರಮಾ ಏಕಾದಶಿ ಸೂರ್ಯೋದಯ: 06:17, ಸೂರ್ಯಾಸ್ತ :

error: Content is protected !!