ಮೊದಲ ಬಾರಿಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ ಕೊಹ್ಲಿ..!

ಮುಂಬೈ: ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮೊದಲು ತಮ್ಮೊಳಗಿನ ಅಸಮಾಧಾನ ಹೊರ ಹಾಕಿದ್ದಾರೆ. ಏಕದಿನ ಪಂದ್ಯದ ತಂಡದಿಂದ ತಮ್ಮನ್ನ ಹೊರಹಾಕಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾರೆ. ಆ ಬಗ್ಗೆ ಮೊದಲ ಬಾರಿಗೆ ಮೌನ ಮುರಿದು ಮಾತನಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಏಕದಿನ ಪಂದ್ಯದ ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ನನಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ. ಡಿಸೆಂಬರ್ 8 ರಂದು ಆಯ್ಕೆ ಸಮಿತಿಯ ನಡೆಯುವುದಕ್ಕೂ ಒಂದು ಗಂಟೆ ಮುನ್ನ ನನ್ನನ್ನು ಸಂಪರ್ಕಿಸಲಾಯಿತು. ಟಿ20 ನಾಯಕತ್ವದಿಂದ ಹೊರ ಬಂದ ನನಗೆ ಏಕದಿನದ ಪಂದ್ಯದ ನಾಯಕತ್ವದ ಬಗ್ಗೆ ಮುನ್ಸೂಚನೆಯೇ ಇರಲಿಲ್ಲ.

ಫೋನ್ ಮಾಡಿದಾಗ ನನ್ನ ಜೊತೆಗೆ ಟೆಸ್ಟ್ ತಂಡದ ಬಗ್ಗೆ ಚರ್ಚೆ ನಡೆಸಿದ್ರು. ಆದ್ರೆ ಫೋನ್ ಕರೆ ಕಟ್ ಆಗುವುದಕ್ಕೂ ಮುನ್ನವೇ ಅವರೇ ನಿರ್ಧರಿಸಿದ್ದರು. ನಾನು ಇನ್ಮುಂದೆ ಏಕದಿನ ತಂಡದ ನಾಯಕನಾಗಿ ಮುಂದುವರೆಯಲ್ಲ ಅಂತ ಐವರು ಆಯ್ಕೆದಾರರು ನಿರ್ಧರಿಸಿದ್ದಾರೆ ಅಂತ ಹೇಳಿದ್ರು. ಅದಕ್ಕೆ ನಾನು ಇನ್ನೇನು ಮಾತಾಡಲಿ, ಒಕೆ ಒಳ್ಳೆದಾಯಿತು ಎಂದು ಒಪ್ಪಿಕೊಂಡೆ ಎಂದು ತಮ್ಮಲ್ಲಿರುವ ಬೇಸರವನ್ನ ಹೊರ ಹಾಕಿದ್ರು.

Share This Article
Leave a Comment

Leave a Reply

Your email address will not be published. Required fields are marked *