ಇಂದು ಅಪ್ಪು 11ನೇ ದಿನದ ಕಾರ್ಯ : ಸಮಾಧಿಗೆ ಪೂಜೆ ಸಲ್ಲಿಸಲಿರುವ ಕುಟುಂಬ

1 Min Read

 

ಬೆಂಗಳೂರು: ಇಂದುಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ 11ನೇ ದಿನದ ಪುಣ್ಯ ಸ್ಮರಣೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಕಾರ್ಯ. ಹೀಗಾಗಿ ದೊಡ್ಮನೆಯ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕುಟುಂಬಸ್ಥರಿಂದ ಪುನೀತ್ ನಿವಾಸದಲ್ಲಿ ಶಾಸ್ತ್ರೋತ್ಸವಾಗಿ ಪೂಜೆ ನೆರವೇರಿಸಲಿದ್ದಾರೆ. ವಿನಯ್ ರಾಜ್ ಕುಮಾರ್ ರಿಂದ ಪೂಜಾ ವಿಧಿವಿಧಾನ ನಡೆಯಲಿದೆ.

ಬಳಿಕ 11 ಗಂಟೆಗೆ ಪುನೀತ್ ರಾಜ್‍ಕುಮಾರ್ ಸಮಾಧಿಗೆ ತೆರಳಿ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಅಪ್ಪುಗೆ ಇಷ್ಟವಾದ ಊಟವನ್ನ ಸಮಾಧಿ ಮುಂದೆ ಎಡೆ ಇಡಲಾಗುತ್ತೆ. ಪುನೀತ್ ರಾಜ್ ಕುಮಾರ್ ವೈಕುಂಠ ಸಮಾರಾಧನೆಗೆ ಕುಟುಂಬಸ್ಥರು ಮತ್ತು ಆಪ್ತ ಬಳಗಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಮನೆಯಲ್ಲಿ ಹೂವಿನ ಅಲಂಕಾರ, ರಸ್ತೆ ಪೂರ್ತಿ ಶಾಮಿಯಾನ ಹಾಕಿ ವ್ಯವಸ್ಥೆ ಮಾಡಲಾಗಿದೆ.

ಕುಟುಂಬಸ್ಥರನ್ನು ಸಮಾಧಿ ಪೂಜೆಗೆ ಕರೆದುಕೊಂಡು ಹೋಗಲು, ಪುನೀತ್ ಮನೆ ಬಳಿ ವೋಲ್ವೋ ಬಸ್ ಕೂಡ ರೆಡಿಯಾಗಿದೆ. 7:30 ರಿಂದ 9 ಗಂಟೆವರೆಗೆ ರಾಹುಕಾಲವಿದ್ದು, ರಾಹುಕಾಲ ಮುಗಿದ ನಂತರ 10 ಗಂಟೆ ನಂತರ ಸಮಾಧಿ ಬಳಿ ತೆರಳಲಿರುವ ಅಣ್ಣಾವ್ರ ಕುಟುಂಬಸ್ಥರು. 10 ರಿಂದ 12 ರ ಅವಧಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *