ಟಿಕೆಟ್ ವಂಚನೆ ಪ್ರಕರಣ: ಪ್ರಹ್ಲಾದ್ ಜೋಶಿಗೆ ರಾಜೀನಾಮೆ ನೀಡುವಂತೆ ಒತ್ತಾಯ

1 Min Read

 

ಬೆಂಗಳೂರು: ಗೋಪಾಲ್ ಜೋಶಿಯವರ ವಿರುದ್ಧ ದಾಖಲಾದ ಕೇಸ್ ಸಂಬಂಧ ಸಚಿವ ದಿನೇಶ್ ಗುಂಡೂರಾವ್, ಇದೀಗ ಪ್ರಹ್ಲಾದ್ ಜೋಶಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ನೀವೂ ಮೊದಲು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದೇ ಆಗ್ರಹಿಸಿದ್ದಾರೆ.

ಪ್ರಹ್ಲಾದ್ ಜೋಶಿಯವರ ಸಹೋದರ ಗೋಪಾಲ್ ಜೋಶಿಯವರ ವಿರುದ್ಧ ಟಿಕೆಟ್ ವಂಚನೆ ಪ್ರಕರಣ ಸಂಬಂಧ ದೂರು ದಾಖಲಾಗಿದೆ. ಗೋಪಾಲ್ ಜೋಶಿಯವರು ಪ್ರಹ್ಲಾದ್ ಜೋಶಿಯವರ ಜೊತೆಗೆ ಇದ್ದಾರೆ ಎಂಬುದು ಇಡೀ ಹುಬ್ಬಳ್ಳಿ ಮಂದಿಗೇನೆ ಗೊತ್ತಿದೆ. ಸಹೋದರ ಗೋಪಾಲ ಜೋಶಿ ಮೇಲೆ ಬಂದಿರುವ ಆರೋಪಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಈ ನಡವಳಿಕೆ ಸರಿಯಲ್ಲ. ನೈತಿಕ ಹೊಣೆ ಹೊತ್ತು ಮೊದಲು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮಾಜಿ ಶಾಸಕ ದೇವಾನಂದ ಚೌಹಾಣ್ ತುಂಬಾ ಗೌರವಯುತವಾದ ವ್ಯಕ್ಯಿ. ಅವರಿಗೇನೆ ಲೋಕಸಭೆ ಚುನಾವಣೆಯ ಟಿಕೆಟ್ ಕೊಡಿಸುವುದಾಗಿ ಗೋಪಾಲ್ ಜೋಶಿ ನಂಬಿಸೊ, 2 ಕೋಟಿ ವಂಚನೆ ಮಾಡಿದ್ದಾರೆ.

ಈ ಸಂಬಂಧ ದೇವಾನಂದ ಚೌಹಾಣ್ ದಾಖಲೆ ನೀಡಿದ್ದಾರೆ. ಪ್ರಹ್ಲಾದ್ ಜೋಶಿಯವರ ಪ್ರಭಾವ ಬಳಸಿಕೊಂಡು ವಂಚನೆ ಮಾಡಲಾಗಿದೆ. ಅಷ್ಟೇ ಅಲ್ಲ ಅಮಿತ್ ಶಾ ಅವರ ಹೆಸರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇಡಿ, ಐಟಿಯವರನ್ನು ಛೂ ಬಿಟ್ಟು ದೇವಾನಂದ ಚೌಹಾಣ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದರು. ಈಗ ಟಿಕೆಟ್ ಕೊಡಿಸುತ್ತೇನೆಂದು ಹೇಳಿ ಎರಡು ಕೋಟಿ ವಂಚಿಸಿದ್ದಾರೆ. ಗೋಪಾಲ್ ಚೌಹಾಣ್ ಅವರು ಆರ್ ಎಸ್ ಎಸ್ ನಲ್ಲಿ ತೊಡಗಿಸಿಕೊಂಡವರು. ಆರ್ ಎಸ್ ಎಸ್ ನಲ್ಲಿ ತೊಡಗಿಕೊಂಡ ಹಲವರು ಈ ರೀತಿಯ ಟಿಕೆಟ್ ಕೊಡಿಸುವ ದಂಧೆಯಲ್ಲಿ ತೊಡಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *