ಕುಣಿಗಲ್ ನಲ್ಲಿ ಟಿಕೆಟ್ ಫೈಟ್ : ಹೈಕಮಾಂಡ್ ಬಳಿಯೇ ಹೋಗ್ತೇನೆಂದ ಮುದ್ದಹನುಮೇಗೌಡ..!

1 Min Read

ತುಮಕೂರು: ವಿಧಾನಸಭಾ ಚುನಾವಣೆ ಇನ್ನು ದೂರ ಇರುವಾಗ್ಲೇ ಟಿಕೆಟ್ ಗಾಗಿ ಜಿದ್ದಾಜಿದ್ದಿ ಶುರುವಾಗಿದೆ. ಕುಣಿಗಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಮಾಜಿ ಸಂಸದ ಮುದ್ದಹನುಮೇಗೌಡ ಕಸರತ್ತು ನಡೆಸುತ್ತಿದ್ದಾರೆ.

ಪಕ್ಷದಿಂದ ನನಗೆ ಅನ್ಯಾಯವಾಗಿದೆ. ಪಕ್ಷಕ್ಕಾಗಿಯೇ ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಥಾನ ತ್ಯಾಗ ಮಾಡಿದ್ದೇನೆ. ಈ ಬಾರಿ ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಕೊಡಬೇಕು. ಇದರಿಂದ ನನಗಾದ ಅನ್ಯಾಯ ಸರಿಯಾಗುತ್ತೆ. ಟಿಕೆಟ್ ಕೊಡಲಿ, ಬಿಡಲಿ ನಾನಂತು‌ ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸೋದು ಶತಸಿದ್ಧವಾಗಿದೆ.

ಟಿಕೆಟ್ ಗಾಗಿ ಹೈಕಮಾಂಡ್ ವರೆಗೂ ಹೋಗುತ್ತೇನೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನ ಭೇಟಿ ಅವರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಇನ್ನು ಸದ್ಯ ಹಾಲಿ ಶಾಸಕ ಕೆಪಿಸಿಸಿ ಅಧ್ಯಕ್ಷ ಸಂಬಂಧಿ ಡಾ.ರಂಗನಾಥ ಅಲಿ ಅವರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *