ಮಕ್ಕಳೇ ಈಜಲು ಹೋಗುವ ಮುನ್ನ ಎಚ್ಚರ : ದಾವಣಗೆರೆಯಲ್ಲಿ ಮನಕಲುಕುವ ಘಟನೆ..!

suddionenews
1 Min Read

ದಾವಣಗೆರೆ: ಅದೆಷ್ಟೋ ಭಾರೀ ಇಂಥ ಮನಕಲುಕುವ ಘಟನೆಗಳನ್ನ ಓದಿದ್ದೇವೆ. ಮಕ್ಕಳು ಈಜಲು ಹೋಗಿ ಪ್ರಾಣ ಕಳೆದುಕೊಂಡ ವಿಚಾರ. ಇದೀಗ ಮತ್ತೇ ಅಂಥದ್ದೇ ಘಟನೆ ಮರುಕಳಿಸಿದೆ. ಜಿಲ್ಲೆಯ ಜಗಳೂರು ಪಟ್ಟಣದ ಕೆರೆಯಲ್ಲಿ ಮೂವರು ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ.

ಜಗಳೂರು ಪಟ್ಟಣದ ಕೆರೆಗೆ ಈಜಲು ಹೋಗಿದ್ದ 10 ವರ್ಷದ ಮೊಹಮ್ಮದ್ ಆಫಾನ್, 8 ವರ್ಷದ ಮೊಹಮ್ಮದ್ ಆಶಿಕ್, 11 ವರ್ಷದ ಸೈಯದ್ ಫೈಜಾನ್ ಮೃತ ಪಟ್ಟಿದ್ದಾರೆ. ಇದರಲ್ಲಿ ಇಬ್ಬರು ಸ್ವಂತ ಅಣ್ಣತಮ್ಮಂದಿರಾಗಿದ್ದಾರೆ.

ಮಧ್ಯಾಹ್ನ ಮನೆಯಿಂದ ಹೋದ ಬಾಲಕರು ಮತ್ತೆ ಮನೆಗೆ ವಾಪಾಸ್ಸಾಗಲಿಲ್ಲ. ಗಾಬರಿಯಾದ ಪೋಷಕರು ಹುಡುಕಾಟ ನಡೆಸಿದ್ದಾರೆ. ಹುಡುಕಾಡುತ್ತಿದ್ದಾಗ ಕೆರೆಯ ದಂಡೆಯ ಮೇಲೆಯೇ ಬಟ್ಟೆಗಳು ಬಿದ್ದಿದ್ದು ಕಂಡು ಬಂದಿದೆ. ತಕ್ಷಣ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಜೊತೆಗೆ ಮೀನುಗಾರರು ಕೆರೆಯ ಒಳಗೆ ಇಳಿದು ಹುಡುಕಿದ್ದಾರೆ. ಆಗ ಮಕ್ಕಳು ಈಜಲು ಹೋಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ರಾತ್ರಿ 9 ಗಂಟೆಯ ವೇಳೆಗೆ ಮೃತ ದೇಹವನ್ನ ಹೊರಗೆ ತೆಗೆಯಲಾಗಿದೆ. ಇಬ್ಬರು ಸಹೋದರನ ಜೊತೆಗೆ ತೆರಳಿದ್ದ ಸ್ನೇಹಿತ ಕೂಡ ಸಾವನ್ನಪ್ಪಿದ್ದಾನೆ. ಮಕ್ಕಳನ್ನ ಆ ಸ್ಥಿತಿಯಲ್ಲಿ ಕಂಡು ಪೋಷಕರು ದಿಗ್ಬ್ರಾಂತರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *