ಭಾರತ್ ಜೋಡೋ ಯಾತ್ರೆಯಲ್ಲಿ ಕಣ್ಣೀರು ಹಾಕುವವರು ಮಹಾ ಕಳ್ಳರು : ಶಾಸಕ ಯತ್ನಾಳ್

1 Min Read

 

ವಿಜಯಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಈ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಣ್ಣೀರು ಹಾಕಿದ್ದರು. ಈ ವಿಚಾರವಾಗಿ ಶಾಸಕ ಬಸನಗೌಡ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಭಾರತ್ ಜೋಡೋ ಯಾತ್ರೆಯಲ್ಲಿ ಕಣ್ಣೀರು ಹಾಖುವವರು ಮಹಾ ಕಳ್ಳರು ಎಂದಿದ್ದಾರೆ.

ಇವರೆಲ್ಲ ಕಣ್ಣೀರು ಹಾಕುವವರಲ್ಲ, ಲೂಟಿ ಹೊಡೆಯುವವರು. ಇವರಿಗೆಲ್ಲಾ ಅದೇಗೆ ಕಣ್ಣೀರು ಬರುತ್ತೆ ಎಂಬುದು ಮಾತ್ರ ಗೊತ್ತಿಲ್ಲ. ಗ್ಲಿಜರಿನ್ ಹಚ್ಚಿಕೊಂಡು ಅಳುತ್ತಾರೆ. ನಿಮ್ಮ ಆಸ್ತಿಯನ್ನು ಬಡವರಿಗೆ ಹಂಚಿಬಿಡಿ. ಕಣ್ಣಿರು ಹಾಕಿದವರು ಈ ರೀತಿ ಮಾಡಿ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ಇದೇ ವೇಳೆ ಪ್ರಿಯಾಂಕ್ ಖರ್ಗೆ ಬಗ್ಗೆ ಮಾತನಾಡಿದ್ದು, ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ಎಲ್ಲಾ ದಲಿತರಿಗೆ ಒಂದೊಂದು ಮನೆ ಕಟ್ಟಿಸಿಕೊಡಲಿ. ಇವರಿಗೆ ಬಡವರ ಬಗ್ಗೆ ಕನಿಕರವಿಲ್ಲ. ಕನಿಕರದಿಂದ ಕಣ್ಣೀರು ಕೂಡ ಹಾಕುತ್ತಿಲ್ಲ. ಪ್ರಿಯಾಂಕ್ ಖರ್ಗೆ ಹಾಗಾದರೆ ತಮ್ಮ ಬಳಿ ಇರುವ ಆಸ್ತಿಯನ್ನು ಬಡವರಿಗೆ ಹಂಚಿಬಿಡಲಿ. ಇದು ಭಾರತ್ ಜೋಡೋ ಅಲ್ಲ ಭಾರತ್ ತೋಡೋ ಯಾತ್ರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *