ಇತಿಹಾಸ ಬಲ್ಲವರು ಇತಿಹಾಸ ಬರೆಯಬಲ್ಲರು : ಸಿಎಂ ಬೊಮ್ಮಾಯಿ

suddionenews
0 Min Read

ಬೆಂಗಳೂರು: 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ಬಿಜೆಪಿ ವತಿಯಿಂದ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದು, ಸಾವರ್ಕರ್ ಬಗ್ಗೆ ಮಾತನಾಡಿದ್ದಾರೆ. ಸಾವರ್ಕರ್ ದೇಶ ವಿಭಜನೆ ತಡೆಯಲು ಯತ್ನಿಸಿದರು ಆಗಲಿಲ್ಲ. ಇತಿಹಾಸ ಬಲ್ಲವರು ಇತಿಹಾಸ ಬರೆಯಬಲ್ಲರು. ಸ್ವಾತಂತ್ರ್ಯ ಹೋರಾಟದ ಇತಿಹಾಸ ಯಾವತ್ತಿಗೂ ಬದಲಾಗುವುದಿಲ್ಲ.

ಈಗ ಸತ್ಯವನ್ನು ಹೇಳುವ ಕಾಲ ಬಂದಿದೆ. ಕೆಲವರು ಸತ್ಯವನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *