Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಸ್ತಬ್ಧ ಚಿತ್ರಕ್ಕೆ ತೃತೀಯ ಬಹುಮಾನ

Facebook
Twitter
Telegram
WhatsApp

ಚಿತ್ರದುರ್ಗ, ಸುದ್ದಿಒನ್, (ಅ.07) : ನಾಡಹಬ್ಬ ಮೈಸೂರು ದಸರಾಗೆ ಅದ್ದೂರಿ ತೆರೆ ಬಿದ್ದಿದೆ. ನಿನ್ನೆ ನಡೆದ ಜಂಬೂ ಸವಾರಿಯಲ್ಲಿ ರಾಜ್ಯದ ವಿವಿಧೆಡೆಯ ಸ್ತಬ್ಧಚಿತ್ರಗಳು ಪ್ರವಾಸಿಗರನ್ನು ಮನಸೂರೆಗೊಳಿಸಿದ್ದವು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಿಗೆ ಮೈಸೂರು ದಸರಾ ಉತ್ಸವ 2022, ಸ್ಥಬ್ದ ಚಿತ್ರ ಉಪಸಮಿತಿಯು ಬಹುಮಾನ ಘೋಷಣೆ ಮಾಡಿದ್ದು ಈ ಬಾರಿ ಚಿತ್ರದುರ್ಗ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಸ್ತಬ್ಧಚಿತ್ರಕ್ಕೆ ಮೂರನೇ ಬಹುಮಾನ ದೊರಕಿದೆ‌.

ಎರಡು ವರ್ಷಗಳ ಕರೋನಾದಿಂದ ಕಳೆಗುಂದಿದ್ದ  ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಈ ಬಾರಿ ಬಹಳ ಆಕರ್ಷಣೀಯವಾಗಿತ್ತು ಮತ್ತು ವೀಕ್ಷಿಸಲು ಜನ ಸಾಗರವೇ ಹರಿದು ಬಂದಿತ್ತು.
ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆ ಜಂಬೂ ಸವಾರಿ, ಜನಪದ ಕಲಾತಂಡಗಳ ಮೆರವಣಿಗೆ ಅಷ್ಟೇ ಪ್ರಾಮುಖ್ಯತೆ ಎಂದರೆ ಸ್ತಬ್ಧ ಚಿತ್ರಗಳ ಮೆರವಣಿಗೆ.

ಚಿತ್ರದುರ್ಗ ಜಿಲ್ಲೆಯ ಸ್ಥಬ್ಧಚಿತ್ರದ ಮುಂಭಾಗದಲ್ಲಿ ವಾಣಿವಿಲಾಸ ಜಲಾಶಯದ ನಿರ್ಮಾಣಕ್ಕೆ ಕಾರಣರಾದ ಕೆಂಪನಂಜಮಣಿ ವಾಣಿವಿಲಾಸ ರಾಣಿಯವರು, ಸರ್.ಎಂ ವಿಶ್ವೇಶ್ವರಯ್ಯ ನವರ ಭಾವಚಿತ್ರ ಮತ್ತು ಕಹಳೆ ಊದುತ್ತಿರುವ ಕಾವಲುಗಾರ, ಹಿಂಭಾಗದಲ್ಲಿ ಒನಕೆ ಓಬವ್ವ, ಅಶ್ವರೂಢರಾದ ರಾಜವೀರ ಮದಕರಿ ನಾಯಕ, ದೀಪಸ್ಥಂಭವನ್ನೊಳಗಿಂಡಿತ್ತು. ಈ ಸ್ಥಬ್ದ ಚಿತ್ರಕ್ಕೆ ಮೂರನೇ ಬಹುಮಾನ ಬಂದಿರುವುದು ಕೋಟೆ ನಾಡಿನ ಜನರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.ಇತ್ತೀಚೆಗಷ್ಟೇ ಸುದೀರ್ಘ 89 ವರ್ಷಗಳ ನಂತರ ಜಲಾಶಯ ತುಂಬಿದ ಖುಷಿಯಲ್ಲಿದ್ದ  ಜನತೆಗೆ ಈ ಬಾರಿ ಜಿಲ್ಲೆಯಿಂದ ಪ್ರತಿನಿಧಿಸಿದ್ದ ಸ್ತಬ್ಧ ಚಿತ್ರವು ಮೂರನೇ ಬಹುಮಾನವನ್ನು ಹೊತ್ತು ತಂದಿರುವುದು ಜಿಲ್ಲೆಯ ಜನರು ಮತ್ತಷ್ಟು ಸಂತಸ ಪಡುವಂತಾಗಿದೆ.

ವರದಿ : ಅರ್ಜಿತ್ ಗೋವಿಂಧನ್, ಮೊ : 9741738979

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೈರುತ್ಯ ಪದವೀಧರ ಚುನಾವಣೆ : ಬಂಡಾಯವೆದ್ದ ರಘುಪತಿ ಭಟ್ ಗೆ ಬೆಂಬಲ ನೀಡಿದ ಈಶ್ವರಪ್ಪ

ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಹಾಗೂ ರಘುಪತಿ ಭಟ್ ಇಬ್ಬರು ಈಗ ಒಂದೇ ದೋಣಿಯ ಪಯಣಗಿರು. ಯಾಕಂದ್ರೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಅವರು ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

ನಮ್ಮ ವಿದ್ಯಾಸಂಸ್ಥೆಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ : ಡಾ.ಕೆ.ಎಂ.ವಿರೇಶ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಮೇ. 21:  ನನ್ನ ವಿದ್ಯಾ ಸಂಸ್ಥೆಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಾಧ್ಯವಾದಷ್ಟು ಉಚಿತವಾದ ಶಿಕ್ಷಣವನ್ನು ನೀಡಲಾಗುವುದು

ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ಕೊಡಬೇಕೆಂಬ ಪರಿಕಲ್ಪನೆ ರಾಜೀವ್‍ಗಾಂಧಿಯವರಲ್ಲಿತ್ತು : ಕೆ. ಅನಂತ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 21: ತಳಮಟ್ಟದಿಂದ ಪಕ್ಷಕ್ಕಾಗಿ ದುಡಿದವರಿಗೆ ಅಧಿಕಾರ ಕೊಡಬೇಕೆಂಬ ಪರಿಕಲ್ಪನೆ ರಾಜೀವ್‍ಗಾಂಧಿಯವರಲ್ಲಿತ್ತು ಎಂದು ಜಿಲ್ಲಾ ಕಾಂಗ್ರೆಸ್

error: Content is protected !!