ನೀ ಗೋಕಾಕ್ ಗೆ ಹೇಗೆ ಬರ್ತೀಯಾ ಅಂತ ಚಾಲೆಂಜ್ ಹಾಕಿದ್ದರು.. ಉತ್ತರ ಕೊಡಲು ಹೋಗಿದ್ದೆ : ಬಸನಗೌಡ ಯತ್ನಾಳ್..!

suddionenews
1 Min Read

 

ವಿಜಯಪುರ: ಇತ್ತಿಚೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಳಗಾವಿಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಕಾರ್ಯಕ್ರಮಕ್ಕೂ ಮುನ್ನ ಸತೀಶ್ ಜಾರಕಿಹೊಳಿಯ ಮಹಿಳಾ ಬೆಂಬಲಿಗರು ಶಾಸಕ ಯತ್ನಾಳ್ ಅವರಿಗೆ ವಾರ್ನಿಂಗ್ ಕೂಡ ಕೊಟ್ಟಿದ್ದರು. ವೇದಿಕೆ ಮೇಲೆನಾದರೂ ಸಾಹುಕಾರ್ ಬಗ್ಗೆ ಮಾತನಾಡಿದರೆ ಅಲ್ಲಿಯೇ ಹೊಡೆಯುತ್ತೀವಿ ಎಂದು ಎಚ್ಚರಿಕೆ ಕೊಟ್ಟಿದ್ದರು. ಆದರೂ ಯತ್ನಾಳ್ ಕಾರ್ಯಕ್ರಮದಲ್ಲಿ ಹೆಸರನ್ನು ಉಲ್ಲೇಖಿಸದೆ ಟಾಂಗ್ ಕೊಟ್ಟು ಬಂದಿದ್ದರು.

ಇದೇ ವಿಚಾರವಾಗಿ ಇದೀಗ ವಿಜಯಪುರದಲ್ಲಿ ಮಾತನಾಡಿದ್ದು, ನನಗೆ ಗೋಕಾಕ್ ಗೆ ನೀನು ಹೇಗೆ ಬರ್ತೀಯಾ ನೋಡುತ್ತೀನಿ ಅಂತ ಸವಾಲು ಹಾಕಿದ್ದರು. ಸತೀಶ್ ಜಾರಕಿಹೊಳಿ ಅವರ ಊರಿನಲ್ಲಿ ಯಾರೂ ಹೋಗುವುದಿಲ್ಲ. ಗೋಕಾಕ್ ಗೆ ಜಿಲ್ಲೆ ಒಳ್ಳೆ ಬಿಹಾರ ರಾಜ್ಯದಂತೆ ಇದೆ ಎಂದು ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ಅವರಿಗೆ ಅಂತ್ಯಕಾಲ ಶುರುವಾಗಿದೆ. ಅದಕ್ಕೆ ಈ ರೀತಿಯೆಲ್ಲಾ ವರ್ತಿಸುತ್ತಿದ್ದಾರೆ. ಅಲ್ಲಿ ಹೋಗಿ ಯಾರೂ ಭಾಷಣ ಮಾಡಲ್ಲ. ಯಾರಿಗೂ ಧಮ್ ಇಲ್ಲ. ಅವರ ಪರ್ಮಿಷನ್ ಇಲ್ಲದೆ ಯಾರೂ ಕೂಡ ಗೋಕಾಕ್ ಗೆ ಬರುವಂತಿಲ್ಲ ಎಂದು ಸತೀಶ್ ಜಾರಕಿಹೊಳಿ ಅವರದ್ದೇ ಆದ ಸಾಮ್ರಾಜ್ಯವನ್ನು ನಿರ್ಮಾಣ ಮಾಡಿಕೊಂಡು ಬಿಟ್ಟಿದ್ದಾರೆ. ಅದಕ್ಕೆ ಉತ್ತರ ಕೊಡುವುದಕ್ಕೆ ನಾನು ಹೋಗಿದ್ದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *