ಕಾರ್ಯಕ್ರಮ ಆಯೋಜನೆಯಲ್ಲಿ ತಪ್ಪಾಗಿದೆ.. ಆದ್ರೆ ನಾಳೆ ಬಿಎಸ್ವೈ ಭಾಗಿಯಾಗುತ್ತಾರೆ : ರವಿಕುಮಾರ್

suddionenews
1 Min Read

ಬೆಂಗಳೂರು: ತುರ್ತಾಗಿ ರಾಷ್ಟ್ರೀಯ ಅಧ್ಯಕರ ಕಾರ್ಯಕ್ರಮ ಫೀಕ್ಸ್ ಆಗಿತ್ತು. 10 ಜಿಲ್ಲೆಯಲ್ಲಿ ಕಾರ್ಯಾಲಯ ಉದ್ಘಾಟನೆ ಆಗಿರೋದ್ರಿಂದ ಒಬ್ಬೊಬ್ಬ ಪ್ರಮುಖರು, ಒಂದೊಂದು ಕಡೆ ಎಂದು ಯೋಜನೆ ಆಗಿತ್ತು. ಈಗ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾಜಿ ಸಿಎಂ ,ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರು ಭಾಗಿಯಾಗುತ್ತಾರೆ ಎಂದು ಯಡಿಯೂರಪ್ಪ ಭೇಟಿ ಬಳಿಕ ಎನ್. ರವಿಕುಮಾರ್ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗುತ್ತಾರೆ. ಜಗದೀಶ್ ಶೆಟ್ಟರ್ ಬೀದರ್ ನಲ್ಲಿ ಭಾಗಿಯಾಗುತ್ತಾರೆ. ಗೋವಿಂದ ಕಾರಜೋಳ, ರಾಮುಲು ಅವರು ಬೇರೆ ಬೇರೆ ಕಡೆ ಭಾಗಿಯಾಗುತ್ತಾರೆ. ಮಾಜಿ ಸಿಎಂ ಬಿಎಸ್ವೈ ಜೊತೆಗೆ ಮಾತಾಡಿದ್ದೇನೆ. ನಾಳೆ ವಿಶೇಷ ವಿಮಾನದಲ್ಲಿ ಕೊಪ್ಪಳಕ್ಕೆ ಹೋಗ್ತಾ ಇದೇವಿ.

ಯಡಿಯೂರಪ್ಪ ಅವರನ್ನು ಬಿಜೆಪಿಗರು ಮರೆತ್ರಾ… ? ಎಂಬ ಪ್ರಶ್ನೆ ಉತ್ತರಿಸಿದ ರವಿಕುಮಾರ್, ಕಾರ್ಯಕ್ರಮ ಆಯೋಜನೆಯಲ್ಲಿ ತಪ್ಪು ಆಗಿದೆ. ನಾಳೆ‌ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ನಾಳೆ‌ ಕಾರ್ಯಕ್ರಮದಲ್ಲಿ ಮಾತಾಡುತ್ತಾರೆ. ಅವರು ಸಹ ಹೇಳಿದ್ದಾರೆ, ನನಗೆ ಸ್ವಲ್ಪ ಲೇಟ್ ಆಗಿ ವಿಷಯ ತಿಳಿದಿದೆ. ನಾಳೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ.

ಇಡಿ ಹಿಡಿತದಲ್ಲಿ ಯಡಿಯೂರಪ್ಪ ಇದ್ದಾರೆ ಎಂಬ ಕಾಂಗ್ರೆಸ್ ಆರೋಪದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎನ್. ರವಿಕುಮಾರ್, ಈ ಮಾತನ್ನು ಡಿಕೆಶಿ, ಸಿದ್ದರಾಮಯ್ಯಗೆ ಹೇಳಬೇಕು. ಯಾಕೆಂದರೆ ಒಂದು ಕಾಲದಲ್ಲಿ ಸೋನಿಯಾ ಗಾಂಧಿ ಅವರ ಅಪಾಯಿಂಟ್‌ಮೆಂಟ್ ಸಿಗುತ್ತಿರಲಿಲ್ಲ. ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಬರ್ತಿದ್ದರು ಎಂದಜ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *