Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಜೆಪಿಯಲ್ಲಿ ಯದುವೀರ್ ರಂತಹ ಸಂತತಿ ಜಾಸ್ತಿಯಾಗಬೇಕಿದೆ : ಬಾನು ಮುಷ್ತಾಕ್

---Advertisement---

 

 

ಹಾಸನ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಇದಕ್ಕೆ ಬಿಜೆಪಿಗರ ವಿರೋಧವಿದ್ರೆ, ಸಂಸದ ಯದುವೀರ್ ಒಡೆಯರ್ ಅವರು ಸ್ಚಾಗತ ಮಾಡಿದ್ದಾರೆ. ಈ ಬಗ್ಗೆ ಬಾನು ಮುಷ್ತಾಕ ಅವರು ಹಾಸನದಲ್ಲಿ ಮಾತನಾಡಿದ್ದಾರೆ.

ನಾನು ಇದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಕೋಟ್ಯಾಂತರ ಕನ್ನಡಿಗರು ಪ್ರೀತಿ, ಅಭಿಮಾನ ಕೊಡ್ತಾ ಇದ್ದಾರೆ. ಒಬ್ಬರು ಅಥವಾ ಇಬ್ಬರ ನೆಗೆಟಿವಿಟಿಗೆ ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು. ಜನರೇ ಆ ಪ್ರತಿಕ್ರಿಯೆಗಳನ್ನ ಕೊಡ್ತಾ ಇದ್ದಾರೆ. ನಾನು ಕೊಡಬೇಕಾದ್ದ ಅಗತ್ಯವಿಲ್ಲ. ರಾಜಕೀಯವನ್ನ ಮಾಡಬೇಕು. ವಿರೋಧ ಪಕ್ಷ, ಆಡಳಿತ ಪಕ್ಷ ಅಂತ ಇರಬೇಕು. ಯಾವ ವಿಚಾರದಲ್ಲಿ ರಾಜಕೀಯ ಮಾಡಬೇಕು, ಮಾಡಬಾರದು ಅನ್ನೋ ಪ್ರಜ್ಞೆ ಸಕ್ರೀಯ ರಾಜಕಾರಣಿಗಳಿಗೆ ಇರಬೇಕು.

ಹಾಗೇ ಬಿಜೆಪಿಯಲ್ಲಿ ಮೈಸೂರಿನ ಯದುವೀರ್ ಅವರಂತಹ ಸಂತತಿ ಜಾಸ್ತಿಯಾಗಲಿ ಎಂದು ಇಷ್ಟಪಡ್ತೀನಿ ನಾನು. ಒಂದು ಸಮತೋಲನದಿಂದ ಒಂದು ವಿಷಯವನ್ನ ಅನ್ವೇಷಿಸಿ, ಯಾವುದೇ ರೀತಿಯಲ್ಲಿಯೂ ದ್ವಂದ್ವ ಸೃಷ್ಟಿಸದಂತೆ ಹೇಳಿಕೆಗಳನ್ನ ನೀಡುವುದು, ಅಂತಹ ವಿದ್ಯಾವಂತ ಹಾಗೂ ಸುಸಂಸ್ಕೃತ ಮನಸ್ಸುಗಳಿಗೆ ಮಾತ್ರ ಸಾಧ್ಯ. ಬೂಕರ್ ಅಂತಹ ಬಹುಮಾನ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿಗಬೇಕಾದರೆ ಅದು ಸುಲಭದ ಮಾತಲ್ಲ. ಅದನ್ನು ಸಹ ಕೆಲವರು ಕೇವಲವಾಗಿ ಮಾತಾಡ್ತಾ ಇದ್ದಾರೆ. ಅದರ ಬಗ್ಗೆ ನನಗೇನು ಬೇಜಾರಿಲ್ಲ. ಅವರವರ ಮಟ್ಟಕ್ಕೆ ಅವರು ಮಾತಾಡ್ತಾರೆ.

2023 ನೇ ಇಸವಿಯಲ್ಲಿ ನಾನು ಜನಸಾಹಿತ್ಯ ಸಮ್ಮೇಳನದಲ್ಲಿ ಆಡಿದ್ದಂತ ಕೆಲವು ಮಾತುಗಳನ್ನು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಹಾಕಿ, ಅದನ್ನು ಸಹ ತನ್ನ ವಿರುದ್ಧ ಬಹು ದೊಡ್ಡ ಆರೋಪವೆಂದು ಬಿಂಬಿಸುತ್ತಾ ಇದ್ದಾರೆ. ಅಂದು‌ ನಡೆದ ಸಮ್ಮೇಳನದಲ್ಲಿಕನ್ನಡ ಸಾಹಿತ್ಯ ಪರಿಷತ್ ಮೂಲಕ ಮುಸ್ಲಿಂ ಸಾಗಿತಿಗಳನ್ನು ದೂರವಿಟ್ಟಿದ್ದಕ್ಕಾಗಿ ಪ್ರತಿರೋಧವಾಗಿ ಆ ಒಂದು ಸಮ್ಮೇಳನವನ್ನ ಆಯೋಜನೆ ಮಾಡಲಾಗಿತ್ತು. ನನಗೆ ನೇರವಾಗಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಮುಸ್ಲಿಂ, ದಲಿತರು, ಮಹಿಳೆಯರ ಪರವಾಗಿ ನಾನು ಮಾತನಾಡಬೇಕಿತ್ತು. ಮಾತನಾಡಿದ್ದೀನಿ. ಅದರಲ್ಲಿ ಹೇಳಿರುವಂತ ಎಲ್ಲವೂ ಅರ್ಥವಾಗಿರಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...