Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜಕೀಯದಲ್ಲಿ ಕೃತಜ್ಞತೆಯೇ ಇಲ್ಲ : ಹೆಚ್. ವಿಶ್ವನಾಥ್

Facebook
Twitter
Telegram
WhatsApp

ಬೆಳಗಾವಿ: ಗೋಕಾಕ್ ನಲ್ಲಿ ಎಂಎಲ್ಸಿ ವಿಶ್ವನಾಥ್ ಬಿಜೆಪಿ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಮಾಧ್ಯಮದವರು ಕೇಳಿದ ಸಚಿವ ಸಂಪುಟದ ಬಗ್ಗೆ ಮಾತನಾಡಿದ ಅವರು, ಕ್ಯಾಬಿನೇಟ್ ರಿ ಶಫಲ್ ಬಗ್ಗೆ ಗೊತ್ತಿಲ್ಲ. ನಾನು ಆಕಾಂಕ್ಷಿ ಕೂಡ ಅಲ್ಲ.

ಸಚಿವ ಆಗಬೇಕು ಎಂದುಕೊಂಡಿದ್ದ ಸಮಯದಲ್ಲಿ ಅದೆಲ್ಲವನ್ನು ಮಣ್ಣು ಮಾಡಿದ್ದು ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ. ಸಮ್ಮಿಶ್ರ ಸರ್ಕಾರದ ಪಾತ್ರವನ್ನ, ಬಿಜೆಪಿ ಸರ್ಕಾರದ ಸ್ಥಾಪನೆ. ಆ ಸಂದರ್ಭದಲ್ಲಿ ನಾವೆಲ್ಲಾ ಎಷ್ಡು ಶ್ರಮ ಹಾಕಿದೆವು. ಮತ್ತೆ ನಮ್ಮನ್ನ ಎಂಎಲ್ಸಿ ಮಾಡುವ ವಿಚಾರದಲ್ಲಿ ಅನ್ಯಾಯವಾಗಿದೆ. ಅಸೆಂಬ್ಲಿಯಿಂದ ಎಲೆಕ್ಟ್ ಆಗಿ ಅದನ್ನ ತಪ್ಪಿಸಿ ನಾಮಿನೇಟ್ ಇಟ್ಟುಕೊಂಡ್ರು. ಆಗಲೂ ನನಗೂ ಅನ್ಯಾಯವಾಗಿದೆ. ನಾನು ಆಕಾಂಕ್ಷಿಯಲ್ಲ. ಸರ್ಕಾರದ ಜೊತೆ ಕೆಲಸ ಮಾಡುತ್ತಿದ್ದೇನೆ.

ರಮೇಶ್ ಜಾರಕಿಹೊಳಿಗೆ ಸಚುವ ಸ್ಥಾನ ಕೈತಪ್ಪುತ್ತಿರುವ ವಿಚಾರ ಮಾತನಾಡಿದ ಅವರು, ರಮೇಶ್ ಗೆ ಸಚಿವ ಸ್ಥಾನ ಕೈತಪ್ಒಲು ಕಾಣುವ ಕೈಗಳೇ ಕಾರಣವಾಗಿವೆ. ರಮೇಶ್ ಮತ್ತು ನನ್ನನ್ನ ಕಾಣುವ ಕೈಗಳೇ ಮುಗಿಸುತ್ತಿವೆ.

ಸಿದ್ದರಾಮಯ್ಯ, ನಾನು, ರಮೇಶ್ ಹಿಂದುಳಿದ ವರ್ಗದವರು. ಹಿಂದುಳಿದ ವರ್ಗದವರು ಯಾರು ಬದುಕಂಗಿಲ್ಲ ಇಲ್ಲಿ. ರಮೇಶ್ ಜಾರಕಿಹೊಳಿ ನಮ್ಮ ಸ್ನೇಹಿತರು. ಜೊತೆಗೆ ಬಂದವರು. ಬಿಜೆಪಿ ಸರ್ಕಾರ ಸ್ಥಾಪನೆಗೆ ಅವರು ಕೂಡ ಮುಖ್ಯ ಪಾತ್ರವಹಿಸಿದವರು. ಅವರಿಗೆ ಹೀಗೆ ಆಟವಾಡಿಸಿದರೆ ಹೇಗೆ..? ಇದೆಲ್ಲಾ ತಾತ್ಕಾಲಿಕ ನಿಮಗೆ ಅಧಿಕಾರ ಕೊಟ್ಟವರೆ ನಾವೂ. ನಾವೂ ಕೊಟ್ಟ ತ್ರಿಶೂಲದಿಂದ ನಮ್ಮನ್ನೇ ತಿವಿಯುತ್ತಿದ್ದೀರಿ. ರಮೇಶ್ ಮತ್ತು ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಅವರನ್ನ ಕರೆದುಕೊಂಡು ಬಂದ್ವಿ ಸಿಎಂ ಆದ್ರೂ. ಆದ್ರೆ ಏನಾಯ್ತು ನಮ್ಮನ್ನೇ ಕಡೆಗಣಿಸಿದ್ರು. ರಾಜಕೀಯದಲ್ಲಿ ಕೃತಜ್ಞತೆಯೇ ಇಲ್ಲದಂತಾಗಿದೆ. ರಾಜಕಾರಣಿಗಳಲ್ಲಿ ಕೃತಜ್ಞತೆಯಿಲ್ಲದಂತಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಂಬ್ಯುಲೆನ್ಸ್ ಬಂದಿದ್ದರೆ ನಟಿ ಪವಿತ್ರಾ ಬದುಕುತ್ತಿದ್ದರೇನೋ..?

    ಕನ್ನಡ ಹಾಗೂ ತೆಲುಗಿನ ಖ್ಯಾತ ನಟಿ ಪವಿತ್ರಾ ಜಯರಾಂ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ವಿಚಾರ ತೆಲುಗು ಇಂಡಸ್ಟ್ರಿಗೆ ದೊಡ್ಡ ಆಘಾತವನ್ನೇ ತಂದೊಡ್ಡಿದೆ. ತ್ತಿಯನಿ ಧಾರಾವಾಹಿಯಲ್ಲಿ ತಿಲೋತ್ತಮನಾಗಿ ಎಲ್ಲರ ಗಮನ ಸೆಳೆದಿದ್ದರು.

ಜೇನುತುಪ್ಪ ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ಜೇನುತುಪ್ಪದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಜೇನುತುಪ್ಪದಿಂದ ಅನೇಕ ಪ್ರಯೋಜನಗಳಿವೆ. ಜೇನು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ.  ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಜೇನು ತುಂಬಾ ಆರೋಗ್ಯಕಾರಿ.

ಈ ರಾಶಿಯವರು ಅಪಾರ ಖಜಾನೆ ಸಂಪತ್ತು ಹೊಂದಿರುವರು.

ಈ ರಾಶಿಯವರು ಅಪಾರ ಖಜಾನೆ ಸಂಪತ್ತು ಹೊಂದಿರುವರು. ಈ ರಾಶಿಯವರು ಬಯಸಿದ್ದೆಲ್ಲಾ ಪಡೆಯುವ ಆಶಾವಾದಿಗಳು.   ಸೋಮವಾರ ರಾಶಿ ಭವಿಷ್ಯ -ಮೇ-13,2024 ಸೂರ್ಯೋದಯ: 05:48, ಸೂರ್ಯಾಸ್ತ : 06:36 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

error: Content is protected !!