ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ನಿಧನ : ಶೂಟಿಂಗ್ ನಲ್ಲಿದ್ದಾಗಲೇ ಹೃದಯಾಘಾತ

1 Min Read

ಉಡುಪಿ: ಇತ್ತೀಚೆಗಷ್ಟೇ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಆ ನೋವು ಮಾಸುವ ಮುನ್ನವೇ ಇನ್ನೊಬ್ಬ ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. 60 ವರ್ಷದ ರಾಜು ತಾಳಿಕೋಟೆ ಉಡುಪಿಯ ಮರಡಿಕಲ್ ಕಾಲೇಜಿನಲ್ಲಿ ನಿಧನರಾಗಿದ್ದಾರೆ.

ಶೂಟಿಂಗ್ ನಲ್ಲಿ ಭಾಗಿಯಾಗಿದ್ದಂತ ಸಂದರ್ಭದಲ್ಲಿಯೇ ಈ ದುರ್ಘಟನೆ ನಡೆದಿದೆ. ಶೈನ್ ಶೆಟ್ಟಿ ಅಭಿನಯದ ಸಿನಿಮಾದಲ್ಲಿ ರಾಜು ತಾಳಿಕೋಟೆ ಕಾಣಿಸಿಕೊಂಡಿದ್ದರು. ಆಗ ಎದೆ ನೊಇವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನ ಉಡುಪಿಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪ್ರೀತಿಸುವ ಹಿಡಿ ಜೀವಗಳನ್ನ ಬಿಟ್ಟು ಹೊರಟೆ ಹೋಗಿದ್ದಾರೆ. ನಾಟಕಗಳ ಮೂಲಕ, ಹಾಸ್ಯದ ಮೂಲಕ ಎಲ್ಲರನ್ನು ರಂಜಿಸಿದವರು. ಇಂದು ವಿಧಿಯ ಕೂಗಿಗೆ ಬಂದೇ ಎಂದು ಹೊರಟು ಹೋಗಿದ್ದಾರೆ.

ತಾಳಿಕೋಟೆ ಎಂಬ ಊರಿನಲ್ಲಿ ಹುಟ್ಟಿ ಬೆಳೆದವರು ರಾಜು. ಅವರು ಜನಿಸಿದ್ದು 1965ರಲ್ಲಿ. ಮುಂದೆ ಊರಿನ ಹೆಸರೊಂದಿಗೆ ಅಂದ್ರೆ ರಾಜು ತಾಳಿಕೋಟೆ ಎಂದೇ ಖ್ಯಾತಿ ಪಡೆದರು. ಅದೇ ಹೆಸರಿನಿಂದ ಗುರುತಿಸಲಾಯಿತು. ಆದರೆ ಅವರ ಮೂಲ ಹೆಸರು ರಾಜೆಸಾಬ್ ಮಕ್ತುಂಸಾಬ್ ಯಂಕಂಚಿ ಎಂಬುದಾಗಿತ್ತು. ನಾಟಕಗಳಲ್ಲಿ, ಸಿನಿಮಾಗಳಲ್ಲಿ ರಾಜು ತಾಳಿಕೋಟೆ ಎಂಬ ಹೆಸರಿನೊಂದಿಗೆ ಖ್ಯಾತಿ ಪಡೆದರು. ಸಿನಿಮಾಗಳಲ್ಲೂ ಹೆಚ್ಚೆಚ್ಚು ನಗಿಸಿದರು. ಮನಸಾರೆ, ಪಂಚರಂಗಿ, ರಾಜಧಾನಿ, ಲೈಫು ಇಷ್ಟೇನೆ, ಅಲೆಮಾರಿ, ಮೈನಾ, ಟೋಪಿವಾಲಾ ಮುಂತಾದ ಸಿನಿಮಾಗಳಲ್ಲಿ ನಟಿಸಿ, ನಕ್ಕು ನಲಿಸಿದ್ದರು. ಅಷ್ಟೇ ಅಲ್ಲ ಬಿಗ್ ಬಾಸ್ ಸೀಸನ್ 7ರಲ್ಲಿಯೂ ಭಾಗವಹಿಸಿದ್ದರು. ಇದರ ಜೊತೆಗೆ ಊರಲ್ಲಿ ಕೃಷಿ ಮಾಡುತ್ತಾ, ಆಡುಗಳನ್ನು ಸಾಕುತ್ತಾ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದವರು, ಹಾರ್ಟ್ ಅಟ್ಯಾಕ್ ಎಂಬ ಭೂತ ಜೀವವನ್ನೇ ಕರೆದೊಯ್ದಿದೆ.

Share This Article
Enable Notifications OK No thanks