ವರ್ಷದ ಎರಡನೆಯ ಹಾಗೂ ಕೊನೆಯ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ : ಎಚ್.ಎಸ್.ಟಿ.ಸ್ವಾಮಿ ಮಾಹಿತಿ…!

1 Min Read

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20 : ಇದೇ ಸೆಪ್ಟೆಂಬರ್ 21 ರ ಭಾನುವಾರ ನಡೆಯಲಿರುವ ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಹಾಗೂ ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ.

ಅಂದು ರಾತ್ರಿ 11 ರಿಂದ ಬೆಳಗಿನ ಜಾವ 3.30 ರವರೆಗೆ ಈ ಗ್ರಹಣವು ಸಂಭವಿಸಲಿದ್ದು, ಯಾವುದೇ ರೀತಿಯ ಆಚರಣೆಗಳನ್ನು ನಡೆಸುವುದು ಸೂಕ್ತವಲ್ಲ. ಇದೊಂದು ಆಕಾಶದಲ್ಲಿ ನಡೆಯಲಿರುವ ನೆರಳು ಬೆಳಕಿನ ಆಟವಾಗಿದ್ದು, ಸೂರ್ಯ, ಭೂಮಿಯ ನಡುವೆ ಚಂದ್ರ ಬಂದು ಸೂರ್ಯನನ್ನು ಮರೆ ಮಾಡುವ ಪ್ರಕ್ರಿಯೆ ಅಷ್ಟೆ. ಅದು ಈ ಬಾರಿ ನಡೆಯುವ ಗ್ರಹಣವು ಭಾಗಶಃ ಸೂರ್ಯಗ್ರಹಣ. ಸೂರ್ಯನ ಸ್ವಲ್ಪ ಭಾಗವನ್ನು ಮಾತ್ರ ಚಂದ್ರ ಆವರಿಸುವ ಪ್ರಕ್ರಿಯೆ. ಇದು ಈ ಬಾರಿ ಪೂರ್ವ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಫೆಸಿಫಿಕ್ ಸಾಗರ ಹಾಗೂ ಅಂಟಾರ್ಟಿಕಾದಲ್ಲಿ ನಡೆಯುವುದರಿಂದ ನಾವು ಯಾವುದೇ, ಭಯ, ಆತಂಕಕ್ಕೆ ಒಳಗಾಗುವುದು ಬೇಡ. ಇದರಿಂದ ಜನಸಾಮಾನ್ಯರಿಗೆ, ಪ್ರಾಣಿ ಪಕ್ಷಿಗಳ ಮೇಲೆಯೂ ಪರಿಣಾಮವಿಲ್ಲ. ಮೌಢ್ಯತೆಯನ್ನು ಹೋಗಲಾಡಿಸಿ, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಎಚ್.ಎಸ್.ಟಿ.ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article