ಅಣ್ಣಾ ಮಲೈಗೆ ದೊಡ್ಡ ತಲೆ ನೋವಾದ ತಮಿಳುನಾಡಿನ ಬಿಜೆಪಿ ನಾಯಕರ ನಡೆ..!

 

ಚೆನ್ನೈ: ತಮಿಳುನಾಡು ಬಿಜೆಪಿ ನಾಯಕರಿಗೆ ಶಾಕ್ ಆಗುವಂತ ಘಟನೆ ನಡೆದಿದೆ. ಈ ಬೆಳವಣಿಗೆ ಅಣ್ಣಾಮಲೈಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿ ಐಟಿ ವಿಭಾಗದ ಹದಿಮೂರು ಪದಾಧಿಕಾರಿಗಳು ಪಕ್ಷ ತೊರೆದಿದ್ದಾರೆ. ರಾಜ್ಯಾಧ್ಯಕ್ಣ ಅಣ್ಣಾಮಲೈಗೆ ಇದೊಂದು ವಿಚಾರ ಚಿಂತೆಗೀಡು ಮಾಡಿದೆ.

ಜೊತೆಗೆ ಸ್ಥಳೀಯವಾಗಿ ಎದ್ದಿರುವ ಗುಸುಗುಸು ಪ್ರಕಾರಣ ಇವರೆಲ್ಲಾ ಸೇರಿ AIADMK ಪಕ್ಷ ಸೇರುತ್ತಾರೆ ಎಂಬ ಸುದ್ದಿಯೂ ಹರಡುತ್ತಿದೆ. ಒಬ್ಬೊಬ್ಬರೇ ಬಿಜೆಪಿ ಪಕ್ಷವನ್ನು ತೊರೆಯುತ್ತಿದ್ದಾರೆ. ಅದರಲ್ಲೂ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಣ್ಣಾಮಲೈ ಇದ್ದಾರೆ. ಈ ಎಲ್ಲಾ ಬೆಳವಣಿಗೆ ಅವರ ನಾಯಕತ್ವವನ್ನು ಪ್ರಶ್ನಿಸುವಂತಾಗಿದೆ.

ಇನ್ನು ಬಿಜೆಪಿ ತೊರೆಯುತ್ತಿರುವ ಐಟಿ ವಿಭಾಗದ ಜಿಲ್ಲಾಧ್ಯಕ್ಷ ಅನ್ಬರಸನ್ ಮಾತನಾಡಿ, ಹಲವು ವರ್ಷಗಳಿಂದ ನಾನು ಬಿಜೆಪಿಗಾಗಿ ದುಡಿದಿದ್ದೇನೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂಬುದು ಜನರಿಗೆ ಗೊತ್ತಿದೆ. ಆದ್ರೆ ಪಕ್ಷದಲ್ಲಿನ ಹಲವು ಅಸಹಜ ಬೆಳವಣಿಗೆಯಿಂದ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *