ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಸಾಕಷ್ಟು ಪ್ರಯತ್ನ ಮಾಡುತ್ತಾ ಇದ್ದಾರೆ. ಆದರೆ ಅದು ಅಷ್ಟು ಸುಲಭವಾಗಿ ಸಿಗುವಂತೆ ಕಾಣಿಸ್ತಿಲ್ಲ. ಸದ್ಯಕ್ಕೆ ಸಿದ್ದರಾಮಯ್ಯ ಅವರು ದಾಖಲೆಯನ್ನು ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಸಿಗುವ ಭರವಸೆ ಅವರ ಬೆಂಬಲಿಗರಿಗೆ ಮೂಡಿದೆ. ಇದರ ನಡುವೆ ಹೈಕಮಾಂಡ್, ಡಿಕೆ ಶಿವಕುಮಾರ್ ಅವರಿಗೆ ಅಸ್ಸಾಂ ಚುನಾವಣೆಯ ಜವಾಬ್ದಾರಿ ನೀಡಿದೆ. ಅಸ್ಸಾಂ ಪರಿವೀಕ್ಷಕರಾಗಿ ಡಿಕೆಶಿಯನ್ನ ನೇಮಕ ಮಾಡಿದೆ.
ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಅತಿ ಹೆಚ್ಚು ರಾಹುಲ್ ಗಾಂಧಿ ಅವರನ್ನ ಟೀಕಿಸಿದವರು. ಅದರಲ್ಲೂ ಬಿಸ್ವಾ, ಈ ಮೊದಲು ಕಾಂಗ್ರೆಸ್ ನಲ್ಲಿಯೇ ಇದ್ದು, ಬಿಜೆಪಿಗೆ ಹೋದವರು. ಆದರೆ ಯಾವಾಗಲೂ ರಾಹುಲ್ ಗಾಂಧಿಯನ್ನ ಟೀಕೆ ಮಾಡ್ತಾ ಇರ್ತಾರೆ. ಕಾರ್ಟೂನ್, ಜೋಕರ್, ಭವಿಷ್ಯವಿಲ್ಲದ ನಾಯಕ ಹೀಗೆ ಸಾಕಷ್ಟು ಟೀಕೆ ಮಾಡ್ತಾ ಇರ್ತಾರೆ. ಅವರನ್ನ ಕಟ್ಟಿ ಹಾಕುವುದಕ್ಕೆ ಹೈಕಮಾಂಡ್ ಡಿಕೆಶಿಯನ್ನೇ ಸರಿಯಾದ ನಾಯಕ ಎಂದು ಹಾರಿಸಿದೆ.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ನನಗೆ ಬೇರೆ ಆಯ್ಕೆ ಇಲ್ಲ, ಪಕ್ಷ ಏನು ಹೇಳುತ್ತದೋ ಅದನ್ನ ನಾನು ಮಾಡಬೇಕಾಗುತ್ತದೆ. ಎಐಸಿಸಿ ಯಿಂದ ಪ್ರೆಸ್ ರಿಲೀಸ್ ಮಾಡಿದ್ದಾರೆ. ನಮಗೆ ಪಕ್ಷದ ಜವಾಬ್ದಾರಿ ಕೊಟ್ಟಿದ್ದಾರೆ. ಈ ಹಿಂದೆಯೂ ಕೂಡ ನನಗೆ ಜವಾಬ್ದಾರಿ ಕೊಟ್ಟಿದ್ದರು. ಈಗಲೂ ಪಕ್ಷದ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಅಲ್ಲಿಗೆ ಹೋಗುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ. ಈ ಹಿಂದೆಯೂ ಬೇರೆ ಬೇರೆ ರಾಜ್ಯಗಳ ಚುನಾವಣೆಗೂ ಮುಖ್ಯ ಜವಾಬ್ದಾರಿಯನ್ನ ಡಿಕೆ ಶಿವಕುಮಾರ್ ಹೆಗಲಿಗೆ ಹಾಕಿತ್ತು.






