ಸರ್ಕಾರ ಪಾಪರ್ ಆಗಿಲ್ಲ ಅಂದ್ರೆ ಸರ್ಕಾರಿ ಶಾಲೆಗೆ ಜಾಸ್ತಿ ಕೊಡ್ಲಿ ; ಆರ್ ಅಶೋಕ್ ಆಗ್ರಹ

suddionenews
1 Min Read

ಬೆಂಗಳೂರು: ಇಂದಿನಿಂದ ಬಜೆಟ್ ಅಧಿವೇಶನ ಶುರುವಾಗಿದ್ದು, ಸ್ಪೀಕರ್ ಯುಟಿ ಖಾದರ್, ಸರ್ಕಾರಿ ಶಾಲೆಗೆ ಇರುವ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. 151 ಬುಕ್ ಸ್ಟಾಲ್ ಇದಾವೆ. ಒಂದು ಲೈಬ್ರರಿಗೆ ಸೀಮಿತವಾದ ಪುಸ್ತಕಗಳನ್ನ ಕೊಡುತ್ತೇವೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಐಎಎಸ್ ಕಲಿಯಬೇಕು ಅಂದ್ರೆ ಅದರಲ್ಲಿ ಮಾಹಿತಿ ಇರೋದಿಲ್ಲ. ಹೀಗಾಗಿ ಪುಸ್ತಗಳನ್ನ ಗುರುತು ಮಾಡಿ ಹೇಳಿ ಎಂದು ತಿಳಿಸಿದರು.

ಇದೇ ವೇಳೆ ಆರ್.ಅಶೋಕ್ ಮಾತನಾಡಿ, ಸಭಾಧ್ಯಕ್ಷರೇ ಇದು ಒಳ್ಳೆಯ ಯೋಜನೆ. ಇದು ಒಳ್ಳೆಯ ಯೋಜನೆ. ಶಾಲಾ ಮಕ್ಕಳಿಗೆ, ಲೈಬ್ರರಿಗೆ ಪುಸ್ತಕಗಳು ಸರ್ಕಾರದ ವತಿಯಿಂದ ಹೋಗುವುದು ಕಡಿಮೆ. ಯಾರೋ ದಾನಿಗಳು ಕೊಡೋದು, ಎನ್ಜಿಒ ಗಳು ಕೊಡುವುದನ್ನ ನಾವೂ ನೋಡಿದ್ದೇವೆ. ನಾವ್ಯಾರು ಕೊಟ್ಟಿಲ್ಲ. ಆದರೆ ಸರ್ಕಾರ ಯಾಕೆ ಕಂಜೂಸುತನ ಮಾಡ್ತಾ ಇದೆ. ನಮಗೆ ಕೊಟ್ಟಿರೋದು 2 ಕೋಟಿಯನ್ನು ಅಭಿವೃದ್ಧಿಗೆ ಕೊಟ್ಟಿರೋದು. ಬಜೆಟ್ ಅನೌನ್ಸ್ ಮಾಡುವಾಗ, ಕನ್ನಡದ ಬಗ್ಗೆ ಅಭಿಮಾನವಿದೆ, ಪುಸ್ತಕದ ಬಗ್ಗೆ ಅಭಿಮಾನವಿದೆ ಅಂತಾರೆ. ಅಭಿಮಾನವಿದ್ದರೆ ಈ ಸರ್ಕಾರಕ್ಕೆ, ಸರ್ಕಾರ ಪಾಪರ್ ಆಗಿಲ್ಲ ಅಂದ್ರೆ ಜಾಸ್ತಿ ಕೊಡಲಿ ಒಳ್ಳೆಯದಲ್ವಾ.

ಆಗ ಸರ್ಕಾರಕ್ಕೆ ಕಾಳಜಿ ಇದೆ ಎಂಬುದು ಅರ್ಥವಾಗುತ್ತದೆ. ಅದರಲ್ಲಿಯೇ ನೀವೂ ಮೆಂಟೈನ್ ಮಾಡೋದಕ್ಕೆ ಹೋದ್ರೆ ಏನ್ ಬಂತು ಕಾಳಜಿ. ಈಗಾಗಲೇ ಸರ್ಕಾರದ ಬಿಲ್ಡಿಂಗ್ ಗಳಿಗೆ ದುಡ್ಡನ್ನ ಕೊಡ್ತಾ ಇದ್ದೀವಿ. ಅದರಲ್ಲಿಯೇ ಡಿಸ್ಕೌಂಟ್ ಹೊಡೆಯೋದಕ್ಕೆ ನೋಡ್ತಾ ಇದ್ದೀರಾ. ಸರ್ಕಾರಕ್ಕೂ ಒಳ್ಳೆಯ ಹೆಸರು ಬರ್ಲಿ, ಮುಖ್ಯಮಂತ್ರಿಗಳಿಗೂ ಒಳ್ಳೆಯ ಹೆಸರು ಬರಲಿ. ನಮ್ಮ ಬಜೆಟ್ ಅನೌನ್ಸ್ ಮಾಡೋದ್ರಲ್ಲೂ ಡಿಸ್ಕೌಂಟ್ ಮಾಡಬೇಡಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *