Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದಾವಣಗೆರೆಗೆ ಬಂದ ಕೆಲವೇ ದಿನಗಳಲ್ಲಿ ಆರೋಪಿಯನ್ನ ಹಿಡಿದ ಶ್ವಾನ.. ಇದರ ವಿಶೇಷತೆ ಕೇಳಿದ್ರೆ ನೀವೂ ಶಾಕ್ ಆಗ್ತೀರ..!

Facebook
Twitter
Telegram
WhatsApp

 

ದಾವಣಗೆರೆ: ಜಿಲ್ಲೆಯಲ್ಲಂತು ಸದ್ಯಕ್ಕೆ ತಾರಾಳದ್ದೆ ಮಾತು. ಹಾಗಂತ ಯಾವುದೋ ಹುಡುಗಿ ಅಂದ್ಕಿಬೇಡಿ. ಇದು ಪೊಲೀಸ್ ಶ್ವಾನ. ಮೊದಲಿಗೆ ಅದರ ಸದ್ಯದ ಸಾಧನೆ ನೋಡಿಬಿಡಿ. ಕೊಲೆ ಆರೋಪಿಯೊಬ್ಬನನ್ನು ಪತ್ತೆ ಹಚ್ಚಿ ತನ್ನ ಸಾಧನೆ ಮೆರೆದಿದೆ.

ದಾವಣಗೆರೆ ತಾಲೂಕಿನ ಮೆಲ್ಲಶೆಟ್ಟಿಹಳ್ಳಿ ಕ್ರಾಸ್ ಬಳಿ ನರಸಿಂಹ ಎಂಬ 26 ವರ್ಷ ಯುವಕನ ಕೊಲೆಯಾಗಿತ್ತು. ಶ್ವಾನ ತಾರಾಳನ್ನು ಆ ಜಾಗಕ್ಕೆ ಕರೆದೊಯ್ಯಲಾಗಿತ್ತು. ಕೊಲೆಯಾದ ಜಾಗದಿಂದ ಓಡಿದ ತಾರಾ ನಿಂತಿದ್ದು 8 ಕಿಲೋ ಮೀಟರ್ ದೂರದ ರಾಮನಗರದ ಆಂಜನೇಯ ದೇವಸ್ಥಾನದ ಪಕ್ಕದ ಮನೆಯಲ್ಲಿ. ಆ ಮನೆ ಯೋಗೀಶ್ ದಾಗಿತ್ತು. ಕೊಲೆ ಮಾಡಿದ ಆರೋಪಿಯನ್ನು ಕೆಲವೇ ಕ್ಷಣಗಳಲ್ಲಿ ಪತ್ತೆ ಹಚ್ಚಿದ್ದು, ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ಈ ಶ್ವಾನ ಅತ್ಯಂತ ಸೂಕ್ಷ್ಮಗ್ರಹಿಯಾಗಿದೆ. ಅಮೆರಿಕಾ ಸೇರಿದಂತೆ ಇನ್ನು ಹಲವು ದೇಶಗಳಲ್ಲಿ ಬಳಸುವಂತಹ ವಿಶೇಷ ತಳಿಯಾಗಿದೆ. ಇದಕ್ಕಿನ್ನು 9 ತಿಂಗಳು ಅಷ್ಟೇ. ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ಪಡೆದು, ಇತ್ತಿಚೆಗಷ್ಟೇ ದಾವಣಗೆರೆಗೆ ಬಂದಿದೆ. ಈಗಾಗಲೇ 14 ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದೆ. ಈ ಮೂಲಕ ಪೊಲೀಸ್ ಇಲಾಖೆ ಹಾಗೂ ಸ್ಥಳೀಯರ ಮನಸ್ಸನ್ನು ತಾರಾ ಶ್ವಾನ ಸೆಳೆದಿದೆ. ಎಲ್ಲರು ವಾವ್ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curry Leaves Juice : ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ?

ಸುದ್ದಿಒನ್ : ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಸಾಮಾನ್ಯವಾಗಿ ಬಳಸುತ್ತೇವೆ. ವಿವಿಧ ರೀತಿಯ ಅಡುಗೆಗೆ ಅವಶ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಕುವುದರಿಂದ ಉತ್ತಮ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ರುಚಿ ಮತ್ತು ವಾಸನೆ ಮಾತ್ರವಲ್ಲದೆ ತುಂಬಾ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ, ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27,2024 ಸೂರ್ಯೋದಯ: 05:58, ಸೂರ್ಯಾಸ್ತ : 06:47

error: Content is protected !!