ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲವರು ಜೆಡಿಎಸ್ ಸೇರ್ಪಡೆ

suddionenews
0 Min Read

ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ವ್ಯಾಪ್ತಿಯ ಮಾಡನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕಾಂಗ್ರೆಸ್‍ನ ಗೀತ ರಾಘವೇಂದ್ರ, ರಾಘವೇಂದ್ರ ಹಾಗೂ ಗ್ರಾಮದ ಬಿಜೆಪಿ.ಮುಖಂಡರಾದ ಪ್ರಸನ್ನ, ಗರೀಬ್‍ಸಾಬ್ ಇವರುಗಳನ್ನು ಜೆಡಿಎಸ್.ಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ರಾಯನಹಳ್ಳಿ ಗ್ರಾಮದಲ್ಲಿ ಕೊಲ್ಲಾಪುರದಮ್ಮ ಜಾತ್ರೆ ಪ್ರಯುಕ್ತ ಬಿಜೆಪಿ.ಮತ್ತು ಕಾಂಗ್ರೆಸ್‍ನ ಕೆಲ ಮುಖಂಡರುಗಳು ಜೆಡಿಎಸ್. ರವೀಶ್‍ರವರನ್ನು ಅದ್ದೂರಿಯಾಗಿ ಬರಮಾಡಿಕೊಂಡ ಈ ಸಂದರ್ಭದಲ್ಲಿ ಕೆ.ಸಿ.ನಾಗರಾಜ್, ಶಶಿಧರ್, ಶಿವಮೂರ್ತಿರವರ ನೇತೃತ್ವದಲ್ಲಿ ಗೀತಾ ರಾಘವೇಂದ್ರ, ರಾಘವೇಂದ್ರ, ಬಿಜೆಪಿ.ಯ ಪ್ರಸನ್ನ, ಗರೀಬ್‍ಸಾಬ್ ಇವರುಗಳು ಜೆಡಿಎಸ್.ಗೆ ಸೇರಿದರು.

ಈ ಸಂದರ್ಭದಲ್ಲಿ ಜೆಡಿಎಸ್.ಕಾರ್ಯಕರ್ತರುಗಳಾದ ನಟರಾಜ್, ಮಂಜು, ಶಿವುಗೌಡರ, ಮಂಜು, ರೆಡ್ಡಪ್ಪ, ಮಾಡನಾಯಕನಹಳ್ಳಿ ಕುಮಾರ್, ಮಂಜುನಾಥ್ ಸೂರನಹಳ್ಳಿ ಹಾಜರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *