ಕಬಿನಿ ಡ್ಯಾಂ ನೋಡಿ ಬರುತ್ತಿದ್ದವರ ಕಾರು ನಾಲೆಗೆ ಬಿದ್ದು ಮೂವರು ವಕೀಲರು ನಾಪತ್ತೆ..!

suddionenews
1 Min Read

ಮೈಸೂರು: ಕಬಿನಿ ಡ್ಯಾಂ ನೋಡಿ ವಾಪಾಸ್ಸಾಗುತ್ತಿದ್ದ ವೇಳೆ ಕಾರು ನಾಲೆಗೆ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸರಗೂರು ತಾಲೂಕಿನ ಸಾಗರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಮೂವರು ವಕೀಲರು ನಾಪತ್ತೆಯಾಗಿದ್ದಾರೆ.

ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಅಶೋಕ್, ದಿನೇಶ್ ಹಾಗೂ ದಿನೇಶ್ ಎಂಬುವವರು ನಾಲೆಗೆ ಬಿದ್ದಿದ್ದಾರೆ. ಕಾರು ಚಲಾಯಿಸುತ್ತಿದ್ದವರು ಕುಡಿದು ವಾಹನ ಚಲಾಯಿಸಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ತನಿಖೆಯ ನಂತರವಷ್ಟೇ ಸತ್ಯಾ ಸತ್ಯತೆ ತಿಳಿಯಲಿದೆ.

ಇನ್ನು ನಾಲೆಗೆ ಬಿದ್ದು ಮೇಲೆ ಬರಲು ಒದ್ದಾಡುತ್ತಿದ್ದವರನ್ನು ಕಂಡು ಸ್ಥಳೀಯರು ಹಗ್ಗ ಬಿಟ್ಟಿದ್ದಾರೆ. ಅದೃಷ್ಟವಶಾತ್ ಅಶೋಕ್ ಹಗ್ಗ ಹಿಡಿದು ಮೇಲೆ ಬಂದಿದ್ದಾರೆ. ಆದರೆ ಇನ್ನಿಬ್ಬರು ವಕೀಲರು ನೀರಿನಲ್ಲಿ ತೇಲೊ ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಸರಗೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *