ಸಮಾಜ ಹಾಳು ಮಾಡುವುದೇ ಬಿಜೆಪಿ ಅಜೆಂಡಾ : ಮಾಜಿ ಸಿಎಂ ಕುಮಾರಸ್ವಾಮಿ

suddionenews
1 Min Read

ಬೆಂಗಳೂರು: ಈ ಬಾರಿಯ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ತರೋದಕ್ಕೆ ಬಿಜೆಪಿ ನಾಯಕರು ಅಸ್ತು ಎಂದಿದ್ದಾರೆ. ಈಗಾಗಲೇ ಗುಜರಾತ್ ನಲ್ಲಿ ಈ ಮಾದರಿ ತರಲಾಗಿದೆ. ಹೀಗಾಗಿ‌ ರಾಜ್ಯದಲ್ಲು ತರಬೇಕೆಂಬ ಯೋಜನೆ ರೂಪಿಸುತ್ತಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ನಾಯಕರ ಮೇಲೆ ಕಿಡಿಕಾರಿದ್ದಾರೆ.

ಸಮಾಜವನ್ನು ಹಾಳು ಮಾಡುವುದೇ ಬಿಜೆಪಿಯ ಅಜೆಂಡ ಎಂದು ಕಿಡಿಕಾರಿರುವ ಕುಮಾರಸ್ವಾಮಿ, ಭಗವದ್ಗೀತೆ ತಲೆ ತುಂಬುತ್ತೆದೆಂದು ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಆ ಹೇಳಿಕೆ ಸಂಬಂಧ ಕುಮಾರಸ್ವಾಮಿ ಆಕ್ರೋಶಗೊಂಡಿದ್ದಾರೆ.

ನಾನು ರಾಮಾಯಣ, ಮಹಾಭಾರತವನ್ನು ಓದಿದ್ದೇನೆ. ಇದರಿಂದ ನಾನು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದೇನೆ. ಆದರೆ ಬಿಜೆಪಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಇಂತಹ ಗುಣಗಳನ್ನ ತಲೆಗೆ ತುಂಬಿಸಿಕೊಳ್ಳುವ ಅವಶ್ಯಕತೆ ಇಲ್ಲ.

ಇಂಥಹ ವಿಚಾರಗಳನ್ನು ಬಿಜೆಪಿಯವರಿಂದ ನಾನು ತಿಳಿದುಕೊಳ್ಳಬಹುದಾದ ಅವಶ್ಯಕತೆ ಇಲ್ಲ. ಅಂಥಹವರಿಂದ ಕಲಿತರೆ ಇನ್ನು ಸಮಾಜ ಹಾಳಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *