Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಶಿವಮೊಗ್ಗದ ಬಿಜೆಪಿ ನಾಯಕನ ಹೆಸರಲ್ಲಿ ವಿಷದ ಸ್ವೀಟ್ ಕಳುಹಿಸಿದ್ದವನ ಬಂಧನ : ಲವ್ ಬ್ರೇಕಪ್ ಗೆ ಕಾರಣರಾದವರ ಮೇಲೆ ಸೇಡು..!

---Advertisement---

ಶಿವಮೊಗ್ಗ: ಪಾಗಲ್ ಪ್ರೇಮಿಗಳು ಏನು ಮಾಡಲು ಹೆದರುವುದಿಲ್ಲ. ಈಗ ನೋಡಿ ವಿಷ ಹಾಕಿದ ಸ್ವೀಟ್ ಗಳನ್ನ ಕೊಟ್ಟು ಪ್ರಾಣವನ್ನೆ ತೆಗೆಯಲು ಮುಂದಾಗಿದ್ದ. ಹೊಸ ವರ್ಷದ ದಿನ ಶಿವಮೊಗ್ಗದ ಮೂವರಿಗೆ ವಿಷದ ಬಾಕ್ಸ್ ಪಾರ್ಸೆಲ್ ಆಗಿತ್ತು. ಅದು ಬಿಜೆಪಿ ಎಂಎಲ್ಸಿ ಧನಂಜಯ ಸರ್ಜಿ ಅವರ ಹೆಸರಲ್ಲಿ. ಅನುಮಾನಗೊಂಡ ವೈದ್ಯರೊಬ್ಬರು ಆ ಸ್ವೀಟ್ ಅನ್ನು ಪರೀಕ್ಷೆ‌ ಮಾಡಿದಾಗ ಅದರಲ್ಲಿ ವಿಷವಿದ್ದದ್ದು ತಿಳಿದು ಬಂದಿತ್ತು. ಈ ಸಂಬಂಧ ಪೊಲೀಸರು ತನಿಖೆ ನಡಸಿದ್ದು, ವಿಷದ ಸ್ವೀಟ್ ಕಳುಹಿಸಿದ್ದವನನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ಆತನಿಂದ ಕಾರಣಗಳನ್ನು ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.

 

ಭದ್ರಾವತಿ ಮೂಲದ ಸೌಹಾರ್ದ ಪಟೇಲ್ ಈ ದುಷ್ಕೃತಚಯ ಮಾಡಿದ್ದಾನೆ. ಈ ಹಿಂದೆ ಕಾನೂ‌ನು ಪದವಿ ವ್ಯಾಸಂಗ ಮಾಡುತ್ತಿದ್ದ ಈತ ವೈದ್ಯೆಯೊಬ್ಬರ ಮಗಳನ್ನು ಲವ್ ಮಾಡುತ್ತಿದ್ದ. ಆದರೆ ಆ ಪ್ರೀತಿ ಈತನಿಗೆ ಸಿಗಲಿಲ್ಲ. ಇದು ಕಾಲೇಜಿನ ಆಡಳಿತ ಮಂಡಳಿಗೂ ಗೊತ್ತಾಗಿತ್ತು. ಬಳಿಕ ಆತನಿಗೆ ಕಾಲೇಜಿನವರೆಲ್ಲ ಸೇರಿ ಬುದ್ದಿ ಹೇಳಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಸೌಹಾರ್ದ್, ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾನೆ. ತನಗೆ ಬುದ್ದಿ ಹೇಳಿದವರಿಗೆ ಹಾಗೂ ವೈದ್ಯರಿಗೆ ವಿಷ ಹಾಕಿದ ಸ್ವೀಟ್ ಕಳುಹಿಸಿದ್ದಾನೆ.

ಸ್ವೀಟ್ ಬಾಕ್ಸ್ ನಲ್ಲಿದ್ದ ಲಡ್ಡುಗಳಿಗೆ ಮಾತ್ರೆಗಳನ್ನು ಬೆರೆಸಿ, ಬೇವಿನ ರಸ ಬೆರೆ, ಮತ್ತೆ ಪ್ಯಾಕ್ ಮಾಡಿ ಹಾಗೇ ಇಟ್ಟಿದ್ದಾನೆ. ಮೂವರ ಅಡ್ರೆಸ್ ಗೆ ಧನಂಜಯ ಸರ್ಜಿ ಅವರ ಹೆಸರಾಕಿ ಕಳುಹಸಿದ್ದಾನೆ. ಈತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ತನಗೆ ಚಿಕಿತ್ಸೆ ನೀಡಿದ ವೈದ್ಯರಿಗೂ ವಿಷ ಹಾಕಿದ ಸ್ವೀಟ್ ಬಾಕ್ಸ್ ಕಳುಹಿಸಿದ್ದಾ‌ನೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment