Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದ ರೈತರಿಗೆ ಕಣ್ಣೀರು : ಮಳೆ ಇಲ್ಲದೆ ಒಣಗಿದ ಶೇಂಗಾ ಬೆಳೆ

---Advertisement---

ಚಿತ್ರದುರ್ಗ: ಕೋಟೆನಾಡು ಅಂತಲ್ಲ ಹಲವು ಜಿಲ್ಲೆಗಳಲ್ಲಿ ರೈತರಿಗೆ ಇದೇ ಸ್ಯೆ ಎದುರಾಗಿದೆ. ಮಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ಹಾಕಿದ ಬೆಳೆ ಒಣಗುವ ಸ್ಥಿತಿ ತಲುಪಿದೆ. ಇದನ್ನು ಕಂಡ ರೈತರು ಕಣ್ಣೀರಾಕುತ್ತಿದ್ದಾರೆ. ಬೆಳೆ ಒಣಗಿದರೆ ಅದಕ್ಕಿಂತ ನೋವು ಮತ್ತೊಂದಿಲ್ಲ ರೈತರಿಗೆ. ಚಿತ್ರದುರ್ಗದ ಚಳ್ಳಕೆರೆ ರೈತರ ಗೋಳು ಇದೆ ಆಗಿದೆ.

ಎಲ್ಲೆಡೆ ಮಳೆ ಬಂದು ಹೋಗೋದು ಮಾಡುತ್ತಾ ಇದೆ. ಸಾಲ ಸೋಲ ಮಾಡಿರುವ ರೈತ ಬೀಜ ಬಿತ್ತನೆ ಮಾಡಿ, ಸಿಗದೆ ಇರುವ ಗೊಬ್ಬರಕ್ಕೆ ಕ್ಯೂ ನಿಂತು ತಂದಿದ್ದಾನೆ. ಎಲ್ಲವನ್ನು ಭೂತಾಯಿ ಒಡಲಿಗೆ ಅರ್ಪಿಸಿದ್ದಾನೆ. ಚಿಗುರೊಡೆದ ಬೆಳೆಗೆ ಸರಿಯಾದ ಪ್ರಮಾಣದಲ್ಲಿ ಮಳೆ ಬಿದ್ದರಲ್ಲವೇ ಬೆಳೆ ಆರೋಗ್ಯಕರವಾಗಿ ಬೆಳೆಯೋದು. ವರುಣನ ಕಣ್ಣಾಮುಚ್ಚಾಲೆ ಆಟಕ್ಕೆ ಚಿಗುರೊಡೆದ ಎಲೆಗಳು ಬಾಡಿ ಹೋಗುತ್ತಿವೆ. ಇದನ್ನ ಕಂಡ ರೈತನ ಮನಸ್ಸು ಕೊರಗುತ್ತಿದೆ.

ವಾಣಿಜ್ಯ ಬೆಳೆಯಾದ ಶೇಂಗಾವನ್ನು ಚಳ್ಳಕೆರೆ ಭಾಗದ ರೈತರು ತಮ್ಮ ಜಮೀನುಗಳಿಗೆ ಹಾಕಿದ್ದಾರೆ. ಶೇಂಗಾ ಚೆನ್ನಾಗಿ ಬರಬೇಕು ಅಂದ್ರೆ ಈ ಸಮಯಕ್ಕೆ ಮಳೆಯೂ ಉತ್ತಮವಾಗಿ ಬರಬೇಕು. ಆದರೆ ಮಳೆ ಕೈಕೊಟ್ಟ ಹಿನ್ನೆಲೆ ಶೇಂಗಾ ಬೆಳೆ ಸಂಪೂರ್ಣವಾಗಿ ಒಣಗಿ ನಿಂತಿದೆ. ಇನ್ನಾದರೂ ಮಳೆಯಾದರೆ ಉಳಿದ ಕೊಂಡು ಬೆಳೆಯಿಂದ ರೈತ ಅಷ್ಟೋ ಇಷ್ಟೋ ಬದುಕುತ್ತಾನೆ. ಇಲ್ಲವಾದರೆ ಮಾಡಿದ ಸಾಲಕ್ಕೂ ಬಡ್ಡಿ ಕಟ್ಟುವುದಕ್ಕೂ ಹಣದ ಇಲ್ಲದ ಕಷ್ಟಬೀಳಬೇಕಾಗುತ್ತದೆ. ಸದ್ಯದ ಸ್ಥಿತಿ ಹೇಗಿದೆ ಅಂದ್ರೆ ರೈತ ಪ್ರತಿ ದಿನ ಮೋಡದತ್ತ ನೋಡುತ್ತಲೇ ಕೂತಿರುವ ಪರಿಸ್ಥಿತಿ ಎದುರಾಗಿದೆ. ವರುಣರಾಯ ಕೃಪೆ ತೋರಿ ಆದಷ್ಟು ಬೇಗ ಮಳೆ ಬರುವಂತಾಗಲಿ, ರೈತನ ನಿರೀಕ್ಷೆಯಂತೆ ಬೆಳೆಯು ಬರುವಂತಾಗಲಿ ಎಂದೇ ಎಲ್ಲರೂ ಆಶಿಸುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...