ಪಾಕಿಸ್ತಾನದ ವಿರುದ್ಧ ಸೋತರು ನ್ಯೂಜಿಲೆಂಡ್ ವಿರುದ್ಧ ಗೆದ್ದೇ ಗೆಲ್ತಾರೆ ಅನ್ನೋ ಭರವಸೆ ಇತ್ತು. ಆದ್ರೆ ನ್ಯೂಜಿಲೆಂಡ್ ವಿರುದ್ಧವೂ ಟೀ ಇಂಡಿಯಾ ಸೋತಿದೆ. ಈ ಸೋಲಿಗೆ ಅಭಿಮಾನಿಗಳು ಮಾತ್ರವಲ್ಲ, ನೆರೆ ದೇಶದ ಅನುಭವಿ ಆಟಗಾರರು ಕೂಡ ಬೇಸರ ಮಾಡಿಕೊಂಡಿದ್ದಾರೆ.
ಈ ಬಾರಿಯ T20 ವಿಶ್ವಕಪ್ ನ ಸೆಮಿಫೈನಲ್ ಗೆ ಭಾರತ ಮುಂದುವರೆಯಬೇಕೆಂದರೆ ಅದು ನ್ಯೂಜಿಲೆಂಡ್ ವಿರುದ್ಧದ ಗೆಲುವು ಅನಿವಾರ್ಯವಾಗಿತ್ತು. ಆದ್ರೆ ಆ ಪಂದ್ಯದಲ್ಲೂ ಸೋಲನ್ನ ಅನುಭವಿಸಿದೆ. ಎಂಟು ವಿಕೆಟ್ ಗಳಿಂದ ಸೋಲು ಕಂಡಿದೆ. ಇದು ಇಡೀ ಟೀಂ ಇಂಡಿಯಾ ಅಭಿಮಾನಿಗಳನ್ನ ನಿರಾಸೆಗೊಳಿಸಿದ್ದಲ್ಲದೇ, ಬೇಸರಕ್ಕೂ ಕಾರಣವಾಗಿದೆ.
ಈ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ಬೌಲರ್ ಶೋಯಬ್ ಅಖ್ತರ್, ನೀವೂ ಕ್ರಿಕೆಟ್ ಆಡಬೇಕಿರುವುದು ಇನ್ಸ್ಟಾಗ್ರಾಮ್ ನಲ್ಲಾ ಅಥವಾ ಮೈದಾನದಲ್ಲಾ ಅಂತ ಯೋಚಿಸಿ ಎಂದು ಸಲಹೆ ನೀಡಿದ್ದಾರೆ. ನಾನು ಪಂದ್ಯದ ಮೊದಲು ಹೇಳಿದಂತೆ, ನ್ಯೂಜಿಲೆಂಡ್ ಟಾಸ್ ಗೆದ್ದರೆ ಭಾರತಕ್ಕೆ ತುಂಬಾ ಕಷ್ಟ ಎಂದು ನಾನು ಬಹಳ ಸಮಯದಿಂದ ಹೇಳುತ್ತಿದ್ದೆ. ಅದೇ ವಿಷಯ ಸಂಭವಿಸಿದೆ, ಇಂದು ಭಾರತ ತಂಡವು ತುಂಬಾ ಕೆಟ್ಟದಾಗಿ ಆಡಿದೆ. ಯಾವ ಸಮಯದಲ್ಲಾದರೂ ಅವರು ಪಂದ್ಯದಲ್ಲಿದ್ದರು ಎಂದು ನನಗೆ ಅನಿಸಲಿಲ್ಲ. ಅವರು ತುಂಬಾ ಒತ್ತಡದಲ್ಲಿ ಕಾಣಿಸಿಕೊಂಡರು, ಎರಡು ತಂಡಗಳು ಆಡುತ್ತಿರುವುದನ್ನು ನೋಡಿ, ಟೀಮ್ ಇಂಡಿಯಾ ಇಂದಿನ ಪಂದ್ಯವನ್ನು ಆಡಿದ ರೀತಿಗೆ ತುಂಬಾ ಬೇಸರವಾಯಿತು ಎಂದಿದ್ದಾರೆ.
ಶಾಹಿದ್ ಅಫ್ರಿದಿ ಕೂಡ ಟೀಂ ಇಂಡಿಯಾ ಸೋಲಿನ ಬಗ್ಗೆ ಬೇಸರಪಟ್ಟುಕೊಂಡು ಟ್ವೀಟ್ ಮಾಡಿದ್ದು, ಭಾರತ ತಂಡ ಈಗ ಸೆಮಿಫೈನಲ್ ತಲುಪಿರುವುದು ಈಗ ಪವಾಡವಾಗಿದೆ ಎಂದಿದ್ದಾರೆ.