ಕುಂಕುಮ ಬೇಡ, ಹೂ ಬೇಡ ಎಂದರೆ ಪರಿಸ್ಥಿತಿ ಹೇಗಿರುತ್ತೆ..? : ತನ್ವೀರ್ ಸೇಠ್

1 Min Read

 

ಮೈಸೂರು: ಹಿಜಬ್ ಶರಿಯತ್ತೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಸಂಸದ ಪ್ರತಾಪ್ ಸಿಂಹ ಹಿಜಬ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ತನ್ವೀರ್ ಸೇಠ್ ಗರಂ ಆಗಿದ್ದಾರೆ. ನಾವೂ ಕೂಡ ಕುಂಕುಮ ಬೇಡ, ಹೂ ಬೇಡ ಎಂದರೆ ಪರಿಸ್ಥಿತಿ ಹೇಗಿರುತ್ತೆ ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದ್ದಾರೆ.

ಭಾರತ ನಮ್ಮದು. ನಾವೂ ಕೂಡ ಇಲ್ಲೆ ಹುಟ್ಟಿದ್ದೇವೆ. ಇಲ್ಲೆ ಸಾಯುತ್ತೇವೆ. ಅವರಿಗೊಂದು ದೇಶ.. ಇವರಿಗೊಂದು ದೇಶ ಎಂದು ಎತ್ತ ಕೊಡಲು ದೇಶ ಏನು ನಿಮ್ಮ ತಾತನದ್ದಾ..? ಈ ದೇಶ ಬಿಟ್ಟು ಹೋಗಿ ಎನ್ನೋದಕ್ಕೆ ನೀವೂ ಯಾರು..? ಬೇರೆ ದೇಶಕ್ಕೆ ಹೋಗಲು ವೀಸಾ ಕೊಡಲು ನೀವ್ಯಾರು ಎಂದು ಪ್ರಶ್ನಿಸಿದ್ದಾರೆ.

ಜವಬ್ದಾರಿಯುತ ಜನಪ್ರತಿನಿಧಿಯಾಗಿ ವಿಚಾರಗಳ ಬಗ್ಗೆ ಮಾತನಾಡಿ. ಎಲ್ಲವನ್ನು ಕೇವಲ ವೋಟ್ ಬ್ಯಾಂಕ್ ದೃಷ್ಟಿಯಿಂದ ನೋಡಬೇಡಿ. ಈ ದೇಶವನ್ನ ಮಾನವೀಯ ಧರ್ಮದ ಆಧಾರದ ಮೇಲೆ ಕಟ್ಟಲಾಗಿದೆ. ಪದವಿಪೂರ್ವ ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯವಲ್ಲ. ಕಡ್ಡಾಯ ಮಾಡಿದ್ದರೆ ನಿಯಮವನ್ನ ಪಾಲಿಸಬೇಕು. ಆದರೆ ಈಗ ಅನಗತ್ಯವಾಗಿ ಅದನ್ನ ಎಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

Share This Article
Leave a Comment

Leave a Reply

Your email address will not be published. Required fields are marked *