Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿದ್ದರಾಮಯ್ಯನವರಿಗೆ ಜೆಡಿಎಸ್ ಕೆಣಕದೇ ಇದ್ದರೆ ನಿದ್ದೆ ಬರಲ್ಲ: ಟಿ.ಎ ಶರವಣ

Facebook
Twitter
Telegram
WhatsApp

ಬೆಂಗಳೂರು: ಸಿದ್ದರಾಮಯ್ಯನವರಿಗೆ ಜೆಡಿಎಸ್ ಕೆಣಕದೇ ಇದ್ದರೆ ನಿದ್ದೆ ಬರಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು. ಈ ವೇಳೆ ಜೆ ಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರೊಬ್ಬರೇನಾ ಅಹಿಂದಾ ನಾಯಕರು ಎಂದು ಪ್ರಶ್ನೆ ಮಾಡಿದರು.

ಇನ್ನೂ ತಾಕತ್ ಇದ್ರೆ ಕ್ಯಾಂಡಿಡೇಟ್ ಹಾಕಬಾರದಿತ್ತು, ನಾವು ಹಾಕಿದ ಕ್ಯಾಂಡಿಡೇಟ್ ಬಗ್ಗೆ ಮಾತನಾಡಲು ನೀವ್ಯಾರು..? ನೀವು ಹಾಕಬೇಕಿತ್ತು ಅಲ್ಪಾ ಸಂಖ್ಯಾತರ ಅಭ್ಯರ್ಥಿಯನ್ನ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್ ಡಿ
ಕುಮಾರಸ್ವಾಮಿ ಅವರನ್ನು ಡೀಲ್ ರಾಜ ಅಂತೀರಾ, ಯಾರು ಡೀಲ್ ರಾಜ ಅಂತಾ ರಾಜ್ಯದ ಜನಕ್ಕೆ ಗೊತ್ತಿದೆ. ಯಾರ್ಯಾರನ್ನು ಎಲ್ಲೆಲ್ಲಿಗೆ ಕಳಿಸಿ ಡೀಲ್ ಮಾಡಿರೋದು ಯಾರು ಅಂತಾ ಎಲ್ರಿಗೂ ಗೊತ್ತಿದೆ.
ಫಾರುಕ್ ಅವರನ್ನು ರಾಜ್ಯಸಭೆಗೆ ನಿಲ್ಲಿಸಿದಾಗ, ಎಂಟು ಜನ ಶಾಸಕರನ್ನು ಕರೆದುಕೊಂಡು ಹೋಗಿ ಡೀಲ್ ಮಾಡಿದ್ದು ಯಾರು.? ಎಂದು ಮತ್ತೆ ಪ್ರಶ್ನೆ ಮಾಡಿದರು.

ಮಾಜಿ ಸಚಿವ ಇಕ್ಬಾಲ್ ಹೇಳ್ತಾರೆ ಜೆಡಿಎಸ್ ಮೋಸ ಮಾಡಿದೆ ಅಂತ,ಮಾನ ಮರ್ಯಾದೆ ಇದ್ದರೆ ಹೀಗೆ ಮಾತಾಡ್ತಾ ಇರಲಿಲ್ಲ
ಕರೆದುಕೊಂಡು ಬಂದು ಶಾಸಕರನ್ನು ಮಾಡಿದ್ರು,ಮಂತ್ರಿ ಮಾಡ್ಬೇಕಾದ್ರೆ ಎಷ್ಟು ವಿರೋಧ ಇತ್ತು. ಪ್ರಮಾಣವಚನ ತೆಗೆದುಕೊಳ್ಳುವಾಗ ಕುಮಾರಸ್ವಾಮಿ ಹೆಸರಿನ‌ ಮೇಲೆ ತೆಗದುಕೊಂಡ್ರಿ.ಇವತ್ತು ಎಲ್ಲೋಯ್ತು ಆ ಮಾತು ಜನ ಬುದ್ದಿವಂತರಿದ್ದಾರೆ ಉತ್ತರ ಕೊಡ್ತಾರೆ.ಕಾಂಗ್ರೆಸ್ ಅವರಿಗೆ ತಾಕತ್ ಇದ್ದರೆ ಮೈನಾರಿಟಿ ಅವರಿಗೆ ಸ್ಥಾನ ಕೊಡಿ ಎಂದು ಸವಾಲ್ ಹಾಕಿದರು.

ಇನ್ನೂ 2013 -18 ರವರೆಗೆ ಅಧಿಕಾರ ಮಾಡಿದ ಸಿದ್ದರಾಮಯ್ಯ ಯಾವ ಕೆಲಸ ಮಾಡಿದಿರಾ. ನಿಮ್ಮ ಪಕ್ಷದಲ್ಲೇ ಸಿದ್ದರಾಮಯ್ಯನವರ ಬಗ್ಗೆ ಪಿತೂರಿ ಮಾಡ್ತಾ ಇದ್ದಾರೆ. ಇಲ್ಲಿಂದ ನಿಮ್ಮನ್ನು ಕಳುಹಿಸಬೇಕು ಅಂತ ಜಮೀರ್ ಅವರನ್ನೇ ಮುಖ್ಯಮಂತ್ರಿ ಕ್ಯಾಂಡೀಟೇಟ್ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಲಗುವ ಮುನ್ನ ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

  ಸುದ್ದಿಒನ್ : ಬಾಳೆಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಅಡಗಿವೆ. ಇವು ದೇಹಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿಯೇ ಸದಾ ಲಭ್ಯವಿರುವ ಬಾಳೆಹಣ್ಣನ್ನು ತಿನ್ನಲು ತಜ್ಞರು ಸಲಹೆ ನೀಡುತ್ತಾರೆ. ಬಾಳೆ ಹಣ್ಣಿನಲ್ಲಿ ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್

ಈ ರಾಶಿಯವರು ಏಕಾಂಗಿ ಬದುಕಲು ಇಷ್ಟಪಡುವರು!

ಈ ರಾಶಿಯವರು ಏಕಾಂಗಿ ಬದುಕಲು ಇಷ್ಟಪಡುವರು! ಈ ರಾಶಿಯವರು ದೊಡ್ಡ ಮಹಾತ್ಮಾಕಾಂಕ್ಷೆ ಹೊಂದಿರುವರು, ಸೋಮವಾರ- ರಾಶಿ ಭವಿಷ್ಯ ಮೇ-20,2024 ಸೂರ್ಯೋದಯ: 05:46, ಸೂರ್ಯಾಸಸ್ತ : 06:38 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

error: Content is protected !!