ಕೆಎಸ್ಆರ್ಟಿಸಿ ಅಧಿಕಾರಿಗೆ ಮಚ್ಚು ತೋರಿಸಿದ ಶಾಸಕ ತನ್ವೀರ್ ಸೇಠ್ ಬೆಂಬಲಿಗರು : ಪೊಲೀಸರಿದ್ದರು ಡೋಂಟ್ ಕೇರ್..!

suddionenews
1 Min Read

ಮೈಸೂರು: KSRTC ಅಧಿಕಾರಿಗೆ ಪೊಲೀಸರ ಎದುರೇ ಶಾಸಕ ತನ್ವೀರ್ ಸೇಠ್ ಅವರ ಬೆಂಬಲಿಗರಿಂದ ಧಮ್ಕಿ ಹಾಕಿರುವ ಘಟನೆ ಸಾತಗಳ್ಳಿ ಬಸ್ ಡಿಪೋದಲ್ಲಿ ನಡೆದಿದೆ.

ಶಾಸಕ ತನ್ವೀರ್ ಸೇಠ್ ಅವರ ಬೆಂಬಲಿಗರು ಎನ್ನಲಾದ ಷಫಿ ಅಹ್ಮದ್ ಹಾಗೂ ಅವರ ಪತ್ನಿ ಕೆ ಎಸ್ ಆರ್ ಟಿ ಸಿ ನಿಲ್ದಾಣದ ಕಟ್ಟಡವನ್ನು ಬಾಡಿಗೆ ಪಡೆದಿದ್ದರು. ಶಾಲೆ ನಡೆಸುವುದಾಗಿ ಹೇಳಿದ್ದರು. ಇದರ ಬಾಡಿಗೆ 1‌ ಕೋಟಿ 80 ಲಕ್ಷ ಕೊಡಬೇಕಾಗಿತ್ತು. ಆದರೆ ಈ ಹಣವನ್ನು ನೀಡಿರಲಿಲ್ಲ. ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಆ ಬಾಡಿಗೆ ಹಣವನ್ನು ಕೇಳುವುದಕ್ಕೆ ಹೋಗಿದ್ದರು.

ಅಲ್ಲಿ ಪೊಲೀಸರು ಕೂಡ ಇದ್ದರು. ಅಧಿಕಾರಿಗಳು ಬಾಡಿಗೆ ಹಣ ಕೇಳಿದ ಕೂಡಲೇ ಷಫಿ ಅವರ ಹೆಂಡತಿ, ಪೇಪರ್ ನಲ್ಲಿ ಸುತ್ತಿಕೊಂಡು ಬಂದಿದ್ದ ಮಚ್ಚನ್ನು ತೆಗೆದಿದ್ದಾರೆ. ಮಚ್ಚು ತೋರಿಸಿ ಅವಾಜ್ ಹಾಕಿದ್ದಾರೆ. ನಾನು ಜೈಲಿಗೆ ಹೋಗುವುದಕ್ಕೆ ಸಿದ್ದ ಎಂದು ಅವಾಜ್ ಹಾಕಿದ್ದಾರೆ. ಅಲ್ಲಿಯೇ ಇದ್ದ ಪೊಲೀಸರು ಮಚ್ಚು ಕಿತ್ತುಕೊಳ್ಳಲು ಹರಸಾಹಸ ಪಟ್ಟರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *