Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

‘ಮಾರ್ಟಿನ್’ ಬಗ್ಗೆ ನೆಗಿಟಿವ್ ರಿವ್ಯೂ ಮಾಡಿ ಸುದ್ದಿಯಲ್ಲಿದ್ದ ಸುಧಾಕರ್ ಅರೆಸ್ಟ್..!

Facebook
Twitter
Telegram
WhatsApp

 

 

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ವಿಶ್ವದಾದ್ಯಂತ ಸೌಂಡು ಮಾಡಲು ಪ್ರಯತ್ನ ಪಟ್ಟಿದ್ದು ಮಾರ್ಟಿನ್ ಸಿನಿಮಾ. 13 ಭಾಷೆಯಲ್ಲಿ ಇದೇ‌ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ತಯಾರಾಗಿತ್ತು. ಆದರೆ ರಿಲೀಸ್ ಆದ ಮೇಲೆ ಅಷ್ಟಾಗಿ ಸದ್ದು ಮಾಡಲಿಲ್ಲ. ನೂರಾರು ಕೋಟಿ ಬಂಡವಾಳ ಹಾಕಿದ್ದರಿಂದ ಥಿಯೇಟರ್ ಗೆ ಜನ ಬರಲೇಬೇಕು ಎಂಬ ಅಭಿಲಾಷೆ ಇಡೀ ತಂಡದ್ದಾಗಿರುತ್ತದೆ. ಈಗಂತು ಒಂದೇ ಒಂದು ವಾರ ಥಿಯೇಟರ್ ನಲ್ಲಿ ಸಿನಿಮಾ ಉಳಿಯುವುದೇ ಹೆಚ್ಚು. ಹೀಗಿರುವಾಗ ಆರಂಭದಲ್ಲೇ ನೆಗೆಟಿವ್ ಕಮೆಂಟ್ ಗಳು ಬಂದರೆ ಸಿನಿಮಾದ ಕಲೆಕ್ಷನ್ ಮೇಲೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಸಿನಿಮಾ ತಂಡ ನೆಗೆಟಿವ್ ಕಮೆಂಟ್ ನೀಡಬೇಡಿ ಎಂದೇ ಹೇಳುತ್ತಾರೆ. ಆದರೆ ಯೂಟ್ಯೂಬರ್ ಸುಧಾಕರ್ ಎಂಬಾತ ಮಾರ್ಟಿನ್ ಸಿನಿಮಾ ನೆಗೆಟಿವ್ ರಿವ್ಯೂ ಮಾಡಿಯೇ ಸುದ್ದಿಯಾಗಿದ್ದರು. ಇದೀಗ ಹಲ್ಲೆ ಆರೋಪದ ಮೇಲೆ ಸುಧಾಕರ್ ಅರೆಸ್ಟ್ ಆಗಿದ್ದಾರೆ.

ಹಲ್ಲೆ ಆರೋಪದಲ್ಲಿ ಸುಧಾಕರ್ ಭಾಗಿಯಾಗಿದ್ದರು ಎನ್ನಲಾಗಿದ್ದು, ಇದೀಗ ಮಾದನಾಯಕನಹಳ್ಳಿ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಸುಧಾಕರ್ ವಿರುದ್ಧ ಪೊಲೀಸರು ವಾರೆಂಟ್ ಸಹ ಜಾರಿ ಮಾಡಿದ್ದರು. ಹಲ್ಲೆ ಕೇಸಿನಲ್ಲಿ ಸುಧಾಕರ್ ಅರೆಸ್ಟ್ ಆಗಿದ್ದಾರೆ. ಸುಧಾಕರ್ ವಿಚಾರಣೆ ನಡೆಸಿದ ಬಳಿಕ ಹಲ್ಲೆಯ ಮಾಹಿತಿ ಸಿಗಲಿದೆ.

ಮಾರ್ಟಿನ್ ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಮಾಡಿದ್ದಾಗಲೂ ಧ್ರುವ ಸರ್ಜಾ ಫ್ಯಾನ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾದನಾಯಕನಹಳ್ಳಿ ಪೊಲೀಸರು ಆಗ ಠಾಣೆಗೆ ಕರೆಸಿ, ಬುದ್ದಿ ಮಾತು ಹೇಳಿ, ವಿಡಿಯೋ ಡಿಲೀಟ್ ಮಾಡಿ ಕಳುಹಿಸಿದ್ದರು. ಆದರೆ ಈಗ ಹಲ್ಲೆ ಆರೋಪದ ಮೇಲೆ ಅರೆಸ್ಟ್ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಜಗದೀಶ್ ಕ್ಷಮೆಯಾಚನೆ : ಯಾಕೆ ಗೊತ್ತಾ..?

  ಬೆಂಗಳೂರು : ಕಳೆದ ಸೀಸನ್ ನಿಂದ ಬಿಗ್ ಬಾಸ್ ರೀತಿ ನೀತಿಯೇ ಬದಲಾಗಿದೆ‌. ಮೊದಲೆಲ್ಲಾ ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ಭಾವನೆಗಳಿಗೂ ಜಾಗ ಇರುತ್ತಾ ಇತ್ತು. ಆದರೆ ಈಗ ಓನ್ಲಿ ಸ್ಪರ್ಧೆ. ಗೆಲ್ಬೇಕು

ಬಿಜೆಪಿ ಸರ್ಕಾರ ಕೊಟ್ಟಿದ್ದ 2D ಬೇಡ, 2A ಬೇಕು : ಕಾಂಗ್ರೆಸ್ ಗೆ ಪಂಚಮಸಾಲಿ ಸ್ವಾಮೀಜಿ ಒತ್ತಾಯ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಹೋರಾಟಗಳು ನಡೆಯುತ್ತಿವೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಸಂಬಂಧ ಸಭೆ ಕೂಡ ನಡೆಸಲಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ, ಶಾಸಕ ಯತ್ನಾಳ್ ಕೂಡ ಭಾಗಿಯಾಗಲಿದ್ದಾರೆ. ಜಯ

ರಾಮನಗರದ ತೋಟದ ಮನೆಯಲ್ಲಿ ಚನ್ನಪಟ್ಟಣ ಅಭ್ಯರ್ಥಿ ಫೈನಲ್ : ಯೋಗೀಶ್ವರ್ ಸಮಾಧಾನಗೊಳಿಸಲು ನಿರ್ಧಾರ..!

    ರಾಮನಗರ: ಚನ್ನಪಟ್ಟಣ ಬೈಎಲೆಕ್ಷನ್ ವಿಚಾರ ರಾಜ್ಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಕಾಂಗ್ರೆಸ್ ಪಕ್ಷಕ್ಕೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ರೆ, ಜೆಡಿಎಸ್ ಲೆಕ್ಕಚಾರದಲ್ಲಿ ಮಗನ ರಾಜಕೀಯ ಭವಿಷ್ಯಕ್ಕೂ ಬಹಳ ಮುಖ್ಯವಾಗಿದೆ. ಇಲ್ಲಿ ಮೈತ್ರಿ

error: Content is protected !!