ರಾಜಕೀಯ ಪ್ರಚಾರದಲ್ಲಿ ಸುದೀಪ್ : ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ..!

1 Min Read

ನಟ ಕಿಚ್ಚ ಸುದೀಪ್ ಸದ್ಯ ರಾಜಕೀಯ ಪ್ರಚಾರದಲ್ಲಿ ತೊಡಗಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಜೊತೆಗೇನೆ ಪ್ರಚಾರಕ್ಕೆ ನಡೆಯುತ್ತಿದ್ದು, ಮಾಮನನ್ನು ಗೆಲ್ಲಿಸಿಕೊಡಿ ಎಂದು ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಈಗಾಗಲೇ ಶಿಗ್ಗಾಂವಿಯಲ್ಲಿ ಪ್ರಚಾರ ನಡೆಸಿ, ರೋಡ್ ಶೋ ನಡೆಸಿದ್ದಾರೆ.

ಸುದೀಪ್ ಹೇಳಿ ಕೇಳಿ ದೊಡ್ಡ ಸೆಲೆಬ್ರೆಟಿ. ಸುದೀಪ್ ನಮ್ಮ ಏರಿಯಾ, ನಮ್ಮ ರೋಡಿಗೆ ಬರ್ತಾರೆ ಅಂದ್ರೆ ಅವರನ್ನ ನೋಡುವುದಕ್ಕೇನೆ ಅಭಿಮಾನಿಗಳು ಸಾಲುಗಟ್ಟಿ ನಿಂತಿರುತ್ತಾರೆ. ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಕಾಯುತ್ತಾ ಇರುತ್ತಾರೆ. ಇನ್ನು ಎಲೆಕ್ಷನ್ ಪ್ರಚಾರಕ್ಕೆ ಬಂದರೆ ಕೇಳಬೇಕಾ. ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ.

ನಟ ಸುದೀಪ್ ತೆರೆದ ವಾಹನದಲ್ಲಿ ಪ್ತಚಾರ ಮಾಡುತ್ತಾ ಇದ್ದರೆ, ಆ ಕಡೆ ಪೊಲೀಸರಿಗೆ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾದಂತೆ ಆಗಿದೆ. ಯಾಕಂದ್ರೆ ಅಷ್ಟೊಂದು ಅಭಿಮಾನಿಗಳನ್ನು ನಿಯಂತ್ರಿಸುವ ಕೆಲಸ ಸುಲಭವಲ್ಲ. ಕೂಡ್ಲಿಗಿಯಲ್ಲಿ ಸುದೀಪ್ ಕಾರಿಗೆ ಅಭಿಮಾನಿಗಳು ಅಡ್ಡ ಹಾಕಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸಂಡೂರಿನಲ್ಲೂ ರೋಡ್ ಶೋ ನಡೆಸಬೇಕಿತ್ತು. ಆದರೆ ಭದ್ರತಾ ದೃಷ್ಟಿಯಿಂದ ಅದನ್ನು ರದ್ದು ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *