Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನೀಟ್‌ ಫಲಿತಾಂಶದಲ್ಲಿ ರಾಷ್ಟ್ರಮಟ್ಟದಲ್ಲಿ ದಾಖಲೆ ನಿರ್ಮಿಸಿದ ಚಿತ್ರದುರ್ಗದ “ಎಸ್‌ ಆರ್‌ ಎಸ್‌” ಕಾಲೇಜಿನ ವಿದ್ಯಾರ್ಥಿಗಳು”

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ :  ನಗರದ  ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮೇ 05 ರಂದು ನಡೆದ 2024ನೇ ಸಾಲಿನ ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ(ನೀಟ್‌) ಪರೀಕ್ಷೆಯಲ್ಲಿ 179ನೇ ರ್ಯಾಂಕ್‌ನೊಂದಿಗೆ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸಿದ್ದಾರೆ. 

ಕಾಲೇಜಿನ ವಿದ್ಯಾರ್ಥಿ ಕು. ಎನ್‌ ಮದನ್‌ ರಾಷ್ಟ್ರಮಟ್ಟದಲ್ಲಿ 179ನೇ ರ್ಯಾಂಕ್‌ ಪಡೆದು ಮಧ್ಯ ಕರ್ನಾಟಕ ಭಾಗದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಕು. ಸೃಜನ್‌ ಪಿ ಟಿ, 278, ಕು.ಜೀವಿಕಾ ಇ, 950ನೇ ರ್ಯಾಂಕ್‌ನೊಂದಿಗೆ ರಾಷ್ಟ್ರಮಟ್ಟದಲ್ಲಿ ದಾಖಲೆ ನಿರ್ಮಿಸಿರುವುದು ಇತಿಹಾಸ.  ಕ್ರಮವಾಗಿ ಕು.ಪ್ರಣತಿ ಹೆಚ್ ವೈ 676, ಕು.ನೇಹಾ ಎಸ್‌ 674, ಕು.ಮನೋಜ್‌ ಎಂ 663, ರಕ್ಷೀತಾ ಬಳ್ಳಿ 663, ಕು. ಚಂದ್ರಿಕಾ ಕಲ್ಯಾಣಿ 662, ಕು.ಸಂಜಯ್‌ ಜಿ 643, ಕು.ಜೀವಿಕಾ ಇ 637, ಕು.ಹಿಮಂತ್‌ರಾಜ್‌ 630, ಕು.ಸೃಜನ್‌ 627, ಕು.ಪ್ರತಾಪ್‌ಸಿಂಗ್‌ 624, ಕು.ಆಕಾಶ್‌ ಪಿ 604, ಕು.ದೀಕ್ಷಾ ಪೂಜಾರ್‌ 602, ಅಂಕಗಳನ್ನು ಪಡೆದಿದ್ದಾರೆ. 600ಕ್ಕಿಂತ ಅಧಿಕ ಅಂಕಗಳನ್ನು ಒಟ್ಟು 20 ವಿದ್ಯಾರ್ಥಿಗಳು ಪಡೆದಿರುವುದು ಇತಿಹಾಸ. ನಿರಂತರ ತರಬೇತಿಯನ್ನು ಪಡೆದ ಕಾಲೇಜಿನ ಒಟ್ಟು 80 ವಿದ್ಯಾರ್ಥಿಗಳ ಬ್ಯಾಚ್‌ನಲ್ಲಿ 50 ವಿದ್ಯಾರ್ಥಿಗಳು ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲು ಅರ್ಹರಾಗಿದ್ದಾರೆ.

ಈ ಅದ್ವಿತೀಯ ಸಾಧನಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಹೃದಯಪೂರ್ವಕವಾಗಿ ಆಭಿನಂದಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಂಡಮಾರುತಕ್ಕೆ ಸಿಲುಕಿದ್ದ ಟೀಂ ಇಂಡಿಯಾ ಕಡೆಗೂ ತವರಿಗೆ ಪ್ರಯಾಣ : ನಾಳೆ ಮುಂಬೈನಲ್ಲಿ ಟ್ರೋಫಿಯೊಂದಿಗೆ ರೋಡ್ ಶೋ

ನವದೆಹಲಿ: ಹಲವು ವರ್ಷಗಳ ಬಳಿಕ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಬೀಗಿದೆ. ಈ ಸಂತಸವನ್ನು ಇಡೀ ದೇಶವೇ ಸಂಭ್ರಮಿಸಿದೆ, ಟೀಂ ಇಂಡಿಯಾ ಆಟಗಾರರನ್ನು ಕೊಂಡಾಡಿದ್ದಾರೆ. ಗೆದ್ದ ಮರುದಿನವೇ ಈ ಯಶಸ್ಸನ್ನು ಸಂಭ್ರಮಿಸಬೇಕೆಂದುಕೊಂಡಿದ್ದ ಕ್ರಿಕೆಟ್ ಪ್ರೇಮಿಗಳು

ಬೆಂಗಳೂರಿಗೆ ಬಂದ ದೊಡ್ಮನೆ ಸೊಸೆ : ನಾಳೆ ಯುವ – ಶ್ರೀದೇವಿ ಡಿವೋರ್ಸ್ ಕೇಸ್ ವಿಚಾರಣೆ..!

ಬೆಂಗಳೂರು: ದೊಡ್ಮನೆ ಮೊಮ್ಮಗ ಯುವ ರಾಜ್‍ಕುಮಾರ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಜೋರು ಚರ್ಚೆಯೂ ಆಗಿತ್ತು. ವಿದೇಶದಲ್ಲಿದ್ದ ಶ್ರೀದೇವಿ ಭೈರಪ್ಪ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ನಾಳೆ ಫ್ಯಾಮಿಲಿ

ಕೋಟಿ ವೃಕ್ಷ ಅಭಿಯಾನ : ಪ್ರಸಕ್ತ ವರ್ಷದಲ್ಲಿ ಐವತ್ತು ಸಾವಿರ ಗಿಡಗಳನ್ನು ನೆಡಲಾಗುವುದು : ದೇನಾ ಭಗತ್ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729   ಸುದ್ದಿಒನ್, ಚಳ್ಳಕೆರೆ:  ಕೋಟಿ ವೃಕ್ಷ ಅಭಿಯಾನದಡಿ ಔಷಧಿ ಹಾಗೂ ಪ್ರಾಣಿ ಪಕ್ಷಿಗಳಿಗೆ ಜಾನುವಾರುಗಳಿಗೆ ಉಪಯೋಗವಾಗುವಂತಹ ಗಿಡಗಳನ್ನು ಬೆಳೆಸಲಾಗುತ್ತದೆ.

error: Content is protected !!