Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಶಿಕ್ಷಣ ಅಗತ್ಯ : ಉಮೇಶ್ ವಿ. ತುಪ್ಪದ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, (ಜೂ, 2) : ವಿದ್ಯಾರ್ಥಿಗಳ ಮನೋಭೂಮಿಕೆಯನ್ನು ಹದ ಮಾಡಿ ಅದರಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡಗೆ ಗಮನ ಹರಿಸಿ ಪಾಠವನ್ನು ಮಾಡುವಂತಹ ಯಾವುದೇ ಅಧ್ಯಾಪಕ ಅವರ ಮನಸ್ಸಲ್ಲಿ ಸದಾ ಉಳಿಯುತ್ತಾರೆ ಎಂದು ಎಸ್.ಜೆ.ಎಮ್ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಚಾರ್ಯ ಉಮೇಶ್ ವಿ. ತುಪ್ಪದ ಅವರು ಅಭಿಪ್ರಾಯಪಟ್ಟರು.

ಅವರು ನಗರದ ಎಸ್.ಜೆ.ಎಂ. ಪಾಲಿಟೆಕ್ ನಲ್ಲಿ ಮೇ 31ರಂದು ನಿವೃತ್ತಿ ಹೊಂದಿದ ಆಯ್ಕೆ ಶ್ರೇಣಿ ಉಪನ್ಯಾಸಕರಾದ ಚನ್ನಕೇಶವ ಅವರಿಗೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಬಿಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ನಂತರ  ನಿವೃತ್ತ ಪ್ರಾಚಾರ್ಯರುಗಳಾದ ಸಿ.ಜಿ. ರೇವಣಸಿದ್ದಪ್ಪ  ಮತ್ತು ಡಿ.ವಿ .ಮುರುಗೇಶ್ ಅವರುಗಳು ಮಾತನಾಡಿ ಖಡಕ್ ಮಾತು ಮತ್ತು ಹಿಡಿದ ಕೆಲಸವನ್ನು ಮಾಡದೆ ಬಿಡದ ಛಲ ಹೊಂದಿದ್ದವರು ನಮ್ಮ ಚನ್ನಕೇಶವ ಅವರು ಎಂದು ಹೇಳಿದರು. ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಮಮ್ತಾಜ್ ಬೇಗಂ, ನಳಿನಾಕ್ಷಿ, ಮೋಹನ್.ಎಸ್. ಪಿ.ಡಿ.ಧರ್ಮೇಂದ್ರ ಮತ್ತಿತರರು ಮಾತನಾಡಿದರು.

ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಚನ್ನಕೇಶವ ಅವರು ನನಗೆ ಮೂರು ದಶಕಗಳ ಕಾಲ ಈ ಸಂಸ್ಥೆಯು ಕರ್ತವ್ಯ ಮಾಡಲು ಅವಕಾಶ ಮಾಡಿಕೊಟ್ಟಿದೆ  ಅದಕ್ಕೆ ನಾನು ಋಣಿ. ಸಹದ್ಯೋಗಿಗಳ ಒಡನಾಟ ಉತ್ತಮ ಸೇವೆ ಸಲ್ಲಿಸಲು ಅವಕಾಶವಾಯಿತು ಎಂದು ಹೇಳಿದರು.

ಚನ್ನಕೇಶವ ಅವರ ಶ್ರೀಮತಿ ಶಶಿಕಲಾ ಎಂ.ಎಸ್ ಅವರು ಸಹ ಮಾತನಾಡಿದರು. ಸಿವಿಲ್ ವಿಭಾಗದಲ್ಲಿ ಸಹ ಬೋಧಕರಾಗಿ ಕರ್ತವ್ಯ ನಿರ್ವಹಿಸಿದ ಎಂ.ಮುರುಗೇಶ್ ಮತ್ತು ದಂಪತಿಯನ್ನು ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಎಸ್. ವಿ. ರವಿಶಂಕರ್ ಅವರು ವಹಿಸಿ ಮಾತನಾಡಿದರು. ಸಮಾರಂಭದ ಆರಂಭಕ್ಕೆ ಟಿ .ಎನ್. ಲಿಂಗರಾಜು ಪ್ರಾರ್ಥನೆ ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಬೋಧಕರಾದ ಕೆ. ಸುರೇಶ್ ಸ್ವಾಗತಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸುಸಜ್ಜಿತ ಕನ್ನಡ ಭವನ ನಿರ್ಮಾಣ : ಶಾಸಕ ಟಿ.ರಘುಮೂರ್ತಿ ಭರವಸೆ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್,  ಚಳ್ಳಕೆರೆ, ಜುಲೈ. 08  : ಸಾಹಿತ್ಯ- ಸಾಂಸ್ಕೃತಿಕ ಚಟವಟಿಕೆಗಳಿಗೆ ಅನುಕೂಲವಾಗುವಂತೆ ನಗರದ ಮಧ್ಯ ಭಾಗದಲ್ಲಿ ಸುಸಜ್ಜಿತ ಕನ್ನಡ ಭವನ

Clove for Diabetes : ಲವಂಗದಿಂದ ಮಧುಮೇಹವನ್ನು ಕಡಿಮೆ ಮಾಡುವುದು ಹೇಗೆ ?

ಸುದ್ದಿಒನ್ : ವಿಶ್ವಾದ್ಯಂತ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಒಮ್ಮೆ ಈ ಖಾಯಿಲೆ ಬಂದರೆ ಜೀವನ ಪರ್ಯಂತ ಕಾಡುತ್ತದೆ. ಆದ್ದರಿಂದ ಮುಂಚಿತವಾಗಿ ಕಾಳಜಿ ವಹಿಸಿದರೆ, ಆರೋಗ್ಯಕರ ಮತ್ತು ಸುಂದರವಾಗಿರಬಹುದು. ನಾವು ಮನೆಯಲ್ಲಿ ನಿತ್ಯ ಬಳಸುವ

ಈ ಐದು ರಾಶಿಯವರು ಹೊಸ ಉದ್ಯೋಗದ ಸಂದರ್ಶನದ ಕಾಲ್(ಕರೆ ) ಬರಲಿದೆ,

ಈ ರಾಶಿಯವರ ರೋಮ್ಯಾಂಟಿಕ್ ಜೀವನ ಉತ್ತಮ, ಈ ಐದು ರಾಶಿಯವರು ಹೊಸ ಉದ್ಯೋಗದ ಸಂದರ್ಶನದ ಕಾಲ್(ಕರೆ ) ಬರಲಿದೆ, ಸಿಂಹ ರಾಶಿ ಪ್ರೇಮಿಯ ಮನಸ್ಸು ಚಂಚಲ. ಸೋಮವಾರ ರಾಶಿ ಭವಿಷ್ಯ -ಜುಲೈ-8,2024 ಸೂರ್ಯೋದಯ: 05:51,

error: Content is protected !!