ಹೊಸದುರ್ಗದಲ್ಲಿ ರಾಜ್ಯಮಟ್ಟದ ಟೇಕ್ವಾಂಡೋ ಚಾಂಪಿಯನ್‌ಷಿಪ್ :  ಎಂ.ಧನುಶ್, ಪ್ರಣೀಲ್‍ಗೆ ಚಿನ್ನದ ಪದಕ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.09  : ಹೊಸದುರ್ಗದಲ್ಲಿ ಕಳೆದ 7 ರಂದು ನಡೆದ ಸಾಯಿ ಕಪ್ ಜ-2024 ರಾಜ್ಯ ಮಟ್ಟದ ಟೇಕ್ವಾಂಡೋ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ನಾಲ್ವರು ಪದಕಗಳನ್ನು ಗಳಿಸಿದ್ದಾರೆ.

ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿರವರ ಪುತ್ರ ಎಂ.ಧನುಶ್ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪ್ರಣೀಲ್ ಜಿ. ಚಿನ್ನದ ಪದಕ, ದೀಪಾಲಿ ಬೆಳ್ಳಿ ಪದಕ ಹಾಗೂ ಮೋಹಿತ್ ಆರ್. ಕಂಚಿನ ಪದಕ ಗಳಿಸಿದ್ದಾರೆ. ಕೊರಿಯಾ ದೇಶದ ಆತ್ಮರಕ್ಷಣೆ ಕಲೆಯಾಗಿರುವ ಟೇಕ್ವಾಂಡೋದಲ್ಲಿ ಕಾಲು ಮತ್ತು ಕೈಚಳಕ ಹಾಗೂ ನಿರಾಯುಧದಿಂದ ಎದುರಾಳಿಯನ್ನು ಸಮರ್ಥವಾಗಿ ಮಣಿಸಬಹುದು.

ಶಿಸ್ತುಬದ್ದವಾದ ಟೇಕ್ವಾಂಡೋದಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗಳಿಸಿರುವ ಸ್ಪರ್ಧಾಳುಗಳು ಪೋಷಕರು ಹಾಗೂ ಚಿತ್ರದುರ್ಗ ಜಿಲ್ಲಾ ಟೇಕ್ವಾಂಡೋ ಅಮೆಚೂರ್ ಸೆಂಟರ್‍ಗೆ ಕೀರ್ತಿ ತಂದಿದ್ದಾರೆ.
ಟೇಕ್ವಾಂಡೋ ಮುಖ್ಯ ತರಬೇತುದಾರ ಫಸ್ಟ್ ಡಾನ್ ಬ್ಲಾಕ್ ಬೆಲ್ಟ್ ಕೆ.ರಂಗನಾಥ್ ಸಂಸ್ಥೆಗೆ ಕೀರ್ತಿ ತಂದಿರುವ ಸ್ಪರ್ಧಾಳುಗಳನ್ನು ಅಭಿನಂದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *