ರಾಜ್ಯ ಮಟ್ಟದ ಶಕ್ತಿ ಸಂರಕ್ಷಣಾ ಚಿತ್ರಕಲಾ ಸ್ಪರ್ಧೆ”ಯಲ್ಲಿ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗೆ ಬಹುಮಾನ

1 Min Read

ಸುದ್ದಿಒನ್, ಚಿತ್ರದುರ್ಗ, (ಡಿ.09) : ಭಾರತ ಸರ್ಕಾರದ ರಾಷ್ಟ್ರಿಯ ವಿದ್ಯುತ್ ಮಂತ್ರಾಲಯವು “ಆಜಾದಿ ಕಾ ಅಮೃತ್ ಮಹೋತ್ಸವ” ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ “ಶಕ್ತಿ ಸಂರಕ್ಷಣಾ ಅಭಿಯಾನ-2021,“ರಾಜ್ಯ ಮಟ್ಟದ ಶಕ್ತಿ ಸಂರಕ್ಷಣಾ ಚಿತ್ರಕಲಾ ಸ್ಪರ್ಧೆ”ಯಲ್ಲಿ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯ 6 ನೇ ತರಗತಿ  ವಿದ್ಯಾರ್ಥಿಯಾದ ಮೊಹಮದ್ ಯುನೂಸ್‍ನು ಚಿತ್ರದುರ್ಗ ಜಿಲ್ಲೆಯಿಂದ ಸ್ವರ್ಧಿಸಿದ ಏಕೈಕ ವಿದ್ಯಾರ್ಥಿಯಾಗಿ ರಾಜ್ಯ ಮಟ್ಟದಲ್ಲಿ ಸಮಾಧಾನಕರ ಬಹುಮಾನ ಮತ್ತು ರೂ. 7500/- ನಗದು ಹಾಗೂ ಪ್ರಶಸ್ತಿ ಪುರಸ್ಕಾರಕ್ಕೂ ಪಾತ್ರನಾಗಿದ್ದು ಇದು ಹೆಮ್ಮೆಯ ಸಂಗತಿಯಾಗಿದೆ.

ರಾಜ್ಯಮಟ್ಟದಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗೆ ಸಂಸ್ಥೆಯ ಅಧ್ಯಕ್ಷರು ಬಿ.ಎ. ಲಿಂಗಾರೆಡ್ಡಿ, ಕಾರ್ಯದರ್ಶಿ ಶ್ರೀಮತಿ ಸುಜಾತಾ ಲಿಂಗಾರೆಡ್ಡಿ, ಉಪಾಧ್ಯಕ್ಷರು ಅಮೋಘ್ ಬಿ. ಎಲ್, ಸಂಸ್ಥೆಯ ಆಡಳಿತಾಧಿಕಾರಿಗಳು ಡಾ|| ರವಿ ಟಿ.ಎಸ್, ಪ್ರಾಂಶುಪಾಲರು, ಶ್ರೀ ಪ್ರಭಾಕರ್. ಎಂ. ಎಸ್, ಶಾಲೆಯ ಅಧ್ಯಾಪಕ ವೃಂದ ವಿದ್ಯಾರ್ಥಿಯ ತಂದೆ ಮೊಹಮದ್ ಮಸಿವುಲ್ಲಾ, ತಾಯಿ, ನಾಜ್ಹ್‍ನೀನ್ ತಾಜ್ ಹಾಗೂ ಚಿತ್ರಕಲಾ ತರಬೇತುದಾರರಾದ ಕುಮಾರಿ ರಚನಾ ವಿದ್ಯಾರ್ಥಿಯ ಸಾಧನೆಗೆ ಮತ್ತು ಸೃಜಾನಾತ್ಮಕ ಕಲೆಗೆ ಹರ್ಷದಿಂದ ಅಭಿನಂದಿಸಿರುವುದರ ಜೊತೆಗೆ ವಿದ್ಯಾರ್ಥಿಗೆ ಶುಭಾಶಯ ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *