ಶ್ರೀರಾಮುಲು ಏನು ಮಾಡಿಲ್ಲ ಎನ್ನುವವರು ಏನು ಮಾಡಿದ್ದೀರಿ..? : ಕಾಂಗ್ರೆಸ್ ಗೆ ಪ್ರಶ್ನಿಸಿದ ಶ್ರೀರಾಮುಲು

suddionenews
1 Min Read

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಹಾಗೂ ಚಳ್ಳಕೆರೆ ತಾಲೂಕಿನ ತಳುಕು ಹೋಬಳಿ ವ್ಯಾಪ್ತಿಯ 68 ಕೋಟಿ ವೆಚ್ಚದ ವಿವಿಧ ಕಾಮಗಾರಿ ಗುದ್ದಲಿ ಪೂಜೆ ನೇರವೇರಿದೆ. ಈ ವೇಳೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದಾರೆ.

ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ಶ್ರೀರಾಮುಲು ಏನು ಮಾಡಿಲ್ಲ, ಏನು ಮಾಡಿಲ್ಲ ಅಂದ್ರೆ ನೀವು ಏನು ಮಾಡಿದ್ರಿ ಇಷ್ಟು ವರ್ಷಗಳ ಕಾಲ, ಕಾಂಗ್ರೆಸ್ ಪಕ್ಷ ಕತ್ತೆ ಕಾಯ್ತಾ ಇತ್ತಾ, ಅಥವಾ ನಿದ್ದೆ ಮಾಡ್ತಿತ್ತಾ..? ನೀವು ಏನು ಮಾಡೋದಿಕ್ಕೂ ನಿಮ್ಮ ಕೈಯಲ್ಲಿ ಆಗ್ತಿರಲಿಲ್ಲ ಅಲ್ವಾ ? ಇಷ್ಟು ವರ್ಷ ಬೇಕಾಯ್ತಾ, ಈಗ ಮೊಳಕಾಲ್ಮೂರು ಅಭಿವೃದ್ಧಿಗೆ ಶ್ರೀರಾಮುಲು ಬೇಕಿತ್ತಾ, ಬಿಜೆಪಿ ಬೇಕಿತ್ತಾ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರದಿಂದ ರಾಮುಲು ಪಲಾಯನ ಮಾಡ್ತಾರೆ ಅಂತಾ ಹೇಳುತ್ತಿದ್ದಾರೆ. ನಾನು ಯಾಕೆ ಪಲಾಯನ ಮಾಡಲಿ, ನಾನು ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ, ನನ್ನ ಜೀವನದಲ್ಲಿ ಸೋಲೇ ಇಲ್ಲ ಮುಂದಿನ ಬಾರಿ ಮೊಳಕಾಲ್ಮೂರು ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆದ್ದು ತೋರಿಸುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *