Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಂದನ್-ನಿವೇದಿತಾ ನಡುವೆ ಸೃಜನ್ ಹೆಸರು : ಸುದ್ದಿಗೋಷ್ಠಿಯಲ್ಲಿ ನಿವೇದಿತಾ ಹೇಳಿದ್ದೇನು..?

Facebook
Twitter
Telegram
WhatsApp

ಬೆಂಗಳೂರು: ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಚಂದನ್ ಹಾಗೂ ನಿವೇದಿತಾ ಗೌಡ ದಿಢೀರನೇ ಡಿವೋರ್ಸ್ ಪಡೆದಿದ್ದಾರೆ. ಡಿವೋರ್ಸ್ ಬಳಿಕ ಸಾಕಷ್ಟು ವಿಚಾರಗಳು ಚರ್ಚೆಗೆ ಬಂದಿವೆ. ನಿವೇದಿತಾ ಜೊತೆಗೆ ಸೃಜನ್ ಲೋಕೇಶ್ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಈ ವರ್ಷ ಸೃಜನ್ ಲೋಕೇಶ್ ವಿಶೆಷ ವಿಡಿಯೋ ಮಾಡಿ ಬರ್ತ್ ಡೇಗೆ ವಿಶ್ ಮಾಡಿದ್ದರು. ಆ ವಿಡಿಯೋ ವೈರಲ್ ಮಾಡುವ ಮೂಲಕ ಅವರ ಹೆಸರನ್ನು ತಂದಿದ್ದರು. ಆ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸೃಜನ್ ಲೋಕೇಶ್ ಹೆಸರು ಹೇಳದೆ ಮಾತನಾಡಿದ ನಿವೇದಿತಾ, ಅವರು ನಮ್ಮ ಫ್ಯಾಮಿಲಿ ಫ್ರೆಂಡ್ಸ್. ಅವರ ಫ್ಯಾಮಿಲಿ ಜೊತೆಗೆ ಒಳ್ಳೆ ಬಾಂಡಿಂಗ್ ಇದೆ. ಪ್ರತಿ ವರ್ಷ ಅವರು ಕೂಡ ನನ್ನ ಬರ್ತ್ ಡೇಗೆ ವಿಶ್ ಮಾಡುತ್ತಾರೆ. ಆದರೆ ಈ ವರ್ಷವೇ ಯಾಕೆ ಈ ರೀತಿ ಆಗಿದ್ದು ಶಾಕ್ ಆಗಿದೆ. ಈ ವಿಚಾರ ವೈರಲ್ ಆಗುತ್ತಾ ಇದ್ದಂತೆ ಅವರಿಗೆ ಕಾಲ್ ಮಾಡಿ ಹೇಳಿದೆ, ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ಇದಕ್ಕೆ ನಾವೂ ಕ್ಲಾರಿಟಿ ಕೊಡುತ್ತೀವಿ ಅಂತ. ಆಗ ಗಂಡ-ಹೆಂಡತಿ ಇಬ್ಬರು ಧೈರ್ಯ ಹೇಳಿದರು. ಅದಕ್ಕೆಲ್ಲ ನೀನು ತಲೆ ಕೆಡಿಸಿಕೊಳ್ಳಬೇಡಮ್ಮ ಅಂದ್ರು ಎಂದಿದ್ದಾರೆ.

ಇದೇ ವೇಳೆ ಪ್ರಶಾಂತ್ ಸಂಬರ್ಗಿ ಬಗ್ಗೆಯೂ ಮಾತನಾಡಿ, ಆ ವ್ಯಕ್ತಿ ನಮ್ಮ ಬಗ್ಗೆ ಏನೇನೋ ಹೇಳಿದ್ದಾರೆ. ನಾನು ತೆಲುಗು ನಿರ್ದೇಶಕರ ಹಿಂದೆ ಹೋಗುವುದಕ್ಕೆ ಡಿವೋರ್ಸ್ ಪಡೆದಿದ್ದೇನೆ ಎಂದಿದ್ದಾರೆ. ನಮ್ಮ ಇಬ್ಬರ ಮದುವೆಯಿಂದಾಗಿ ನನ್ನ ಕೆರಿಯರ್ ಗೆ ಯಾವುದೇ ಸಮಸ್ಯೆ ಆಗಿಲ್ಲ. ಮಕ್ಕಳು ಬೇಡ ಅಂತಾಗಲಿ, ಇನ್ಯಾರದ್ದೋ ಜೊತೆಗೆ ಸಂಬಂಧ ಇದೆ ಎಂಬುದಾಗಲಿ ಅಲ್ಲ. ನಾವಿಬ್ಬರು ಮ್ಯೂಚುವಲ್ ಅಂಡರ್ ಸ್ಟಾಡಿಂಗ್ ನಿಂದಾಗಿ ಡಿವೋರ್ಸ್ ಪಡೆದಿದ್ದೇವೆ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾರ್ವಜನಿಕ ಸೇವಾ ವಾಹನಗಳಲ್ಲಿ ವಿಎಲ್‍ಟಿ ಹಾಗೂ ಮತ್ತು ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ : ಏನಿದು ನಿಯಮ…!

  ಚಿತ್ರದುರ್ಗ. ಜುಲೈ04 : ಸಾರ್ವಜನಿಕ ಸೇವೆಯ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸರಕು ಸಾಗಾಣಿಕೆ ವಾಹನಗಳಲ್ಲಿ ವಿಎಲ್‍ಟಿ (ವೆಹಿಕಲ್ ಲೊಕೇಷನ್ ಟ್ರಾಕಿಂಗ್) ಹಾಗೂ ಎಮರ್ಜನ್ಸಿ ಪ್ಯಾನಿಕ್ ಬಟನ್‍ನ್ನು ಅಳವಡಿಸುವುದು ಕಡ್ಡಾಯಗೊಳಿಸಿ ಸಾರಿಗೆ ಆಯುಕ್ತರು

ಮೂಡಾ ಅಕ್ರಮ : ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಪೊನ್ನಣ್ಣ ಏನಂದ್ರು..?

ಬೆಂಗಳೂರು: ಮೂಡಾದಿಂದ ಹದಿನೈದು ಸೈಟುಗಳು ಸಿಎಂ ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರ ಹೆಸರಲ್ಲಿ ಇದೆ ಎಂಬುದು ತಿಳಿದ ಮೇಲೆ ಪ್ರತಿಪಕ್ಷಗಳು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ

ಯುವ-ಶ್ರೀದೇವಿ ಅರ್ಜಿ ವಿಚಾರಣೆ : ಡಿವೋರ್ಸ್ ಸಿಕ್ತಾ..? ಏನಾಯ್ತು ಕೇಸ್..?

ಬೆಂಗಳೂರು: ದೊಡ್ಮನೆ ಕುಡಿ ಯುವ ರಾಜ್‍ಕುಮಾರ್ ಹಾಗೂ ಸೊಸೆ ಶ್ರೀದೇವಿ ಭೈರಪ್ಪ ಅವರ ಡಿವೋರ್ಸ್ ಕೇಸ್ ಅರ್ಜಿ ಇಂದು ವಿಚಾರಣೆಗೆ ಬಂದಿದೆ. ಫ್ಯಾಮಿಲಿ ಕೋರ್ಟ್ ಗೆ ಇಂದು ಇಬ್ಬರು ಹಾಜರಾಗಿದ್ದರು. ಅರ್ಜಿ ವಿಚಾರಣೆ ನಡೆಸಿದ

error: Content is protected !!