Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಗದ್ಗುರು ಶ್ರೀ ಶಂಕರಾಚಾರ್ಯ ಜಯಂತಿ ನಿಮಿತ್ತ ವಿಶೇಷ ಕವನ : ಶ್ರೀಮತಿ ಸುಜಾತ ಪ್ರಾಣೇಶ್

Facebook
Twitter
Telegram
WhatsApp

 

ವಂದಿಸುವೆ ನಿಮಗೆ ಶ್ರೀ ಶಂಕರಾಚಾರ್ಯ
ಅದ್ವೈತವ ಸ್ಥಾಪಿಸಿದ ಗುರುವರೇಣ್ಯ
ಭುವಿಯಲಿ ಅವತರಿಸಿದ ಶಿವ ಸ್ವರೂಪ
ಆದಿರಿ ಮನುಜ ಕುಲಕೆ ದಾರಿದೀಪ

ಕನಕಧಾರ ಸ್ತುತಿಸಿ ಬಡವಿಯನ್ನುದ್ಧರಿಸಿದಿರಿ
ಲಲಿತ ಪಂಚಕ ರಚಿಸಿ ದೇವಿಯ ಸ್ಮರಿಸಿದಿರಿ
ಗಣೇಶಪಂಚಕ ರಚಿಸಿ ಪ್ರಾರ್ಥನೆಗೈದಿರಿ
ಬ್ರಹ್ಮಸೂತ್ರ ಭಾಷ್ಯ ಬರೆದು ದಿಗ್ಗಜರೆನಿಸಿದಿರಿ

ಸೌಂದರ್ಯ ಲಹರಿ ನಿಮ್ಮಪಾಂಡಿತ್ಯದ ಹಿರಿಮೆ
ಶಿವಾನಂದಲಹರಿ ನಿಮ್ಮಜ್ಞಾನದ ಗರಿಮೆ
ಶಿಷ್ಯರಿಗೆ ತೋರಿದಿರಿ ನಿಮ್ಮ ಪ್ರೌಢಿಮೆ
ಶಕ್ತಿ ಪೀಠಗಳ ಸ್ಥಾಪನೆ ನಿಮ್ಮ ಮಹಿಮೆ

ವಿವೇಕ ಚೂಡಾಮಣಿ ಜ್ಞಾನವ ಬೆಳಗಿತು
ಅಷ್ಠಲಕ್ಷ್ಮಿ ಸ್ತೋತ್ರ ಬಡತನ ನೀಗಿಸಿತು
ಭಜ ಗೋವಿಂದಂ ಭವದ ಮೋಹ ಬಿಡಿಸಿತು
ಅನ್ನಪೂರ್ಣೆ ಸ್ತುತಿಯಿಂದ ಹಸಿವು ನೀಗಿತು

ಭಾರತದುದ್ದಗಲಕ್ಕೂ ನಿಮ್ಮ ಪಯಣ
ಮನುಕುಲಕೆ ದೊರಕಿತು ಪಾಂಡಿತ್ಯದ ಹೂರಣ
ಅಲ್ಪಾಯುಷ್ಯದಲ್ಲಿ ಅಗಾಧ ಪಾಂಡಿತ್ಯ
ಕೇದಾರನಾಥದಲ್ಲಿ ಅಂತಿಮ ಕೈವಲ್ಯ

ನಿಮ್ಮ ಕೃತಿಗಳೇ ಬಾಳಿಗೆ ಸೋಫಾನ
ಮಾರ್ಗದರ್ಶನದಿಂದ ಜೀವನ ಪಾವನ
ಯತಿವರ್ಯರೇ ಬಿಡಿಸಿದಿರಿ ಭವಬಂಧನ
ಜಗದ್ಗುರುವೇ ನಿಮಗೆ ಕೋಟಿ ನಮನ

ಕವಯಿತ್ರಿ : ಶ್ರೀಮತಿ ಸುಜಾತ ಪ್ರಾಣೇಶ್, ಚಿತ್ರದುರ್ಗ,

99861 53163

Facebook
Twitter
Telegram
WhatsApp
suddionenews

suddionenews

Leave a Comment

Top Stories

ಒಂದು ತಿಂಗಳು ಬ್ರಶ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ

  ಸುದ್ದಿಒನ್ : ಅನೇಕ ಜನರು ಬಾಯಿಯ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರು ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಎಲ್ಲ ರೀತಿಯಲ್ಲೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ಮುಂಜಾನೆ ಹಲ್ಲುಜ್ಜುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳದಷ್ಟು

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ,

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ, ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-18,2024 ಸೂರ್ಯೋದಯ: 06:13, ಸೂರ್ಯಾಸ್ತ : 05:48 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..!

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..! ಬೆಂಗಳೂರು: ನಟಿ ಅಮೂಲ್ಯ ಜಗದೀಶ್ ಅವರ ಸಹೋದರ ದೀಪಕ್ ಅರಸ್ ಇಂದು ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ಗೆ ಈ ಸುದ್ದಿ ಬಿರುಗಾಳಿಯಂತೆ ಎದುರಾಗಿದೆ. ದೀಪಕ್ ಅರಸ್

error: Content is protected !!