Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಲ್ಲಾ ದೇವರ ಹೆಸರಲ್ಲಿ : ಮೋದೂರು ತೇಜ  ದೀಪಾವಳಿ ಕವನ

Facebook
Twitter
Telegram
WhatsApp

 

ನೊಂದಿರುವ ತಮ್ಮ ಬಂಧುಗಳ ಮನೆಯಲ್ಲಿ
ತಮಂಧವೇ ತುಂಬಿರುವಾಗ
ಒಂದು ಹಣತೆಯನ್ನು ಹಚ್ಚಿಡಲಾಗದ
ನಾವು, ದೇವರ ಹೆಸರಿನಲ್ಲಿ
ಲಕ್ಷದೀಪೋತ್ಸವ ನಡೆಸುತ್ತೇವೆ.

ಮೃಷ್ಟಾನ್ನ ಬೋಜನದ
ಜಿಡ್ಡಿನಲ್ಲೆ ಜಡ್ಡುಗಟ್ಟಿರುವ ನಮಗೆ
ಅಳುವ ಹಸುಗೂಸುಗಳ
ಹಸಿವಿನ ಸಂಕಟ
ಅರಿಯಲಾರದ ನಾವು
ದೇವರ ಹೆಸರಲ್ಲಿ
ಹಾಲಿನಭಿಷೇಕ ಮಾಡುತ್ತೇವೆ.

ಹತ್ತು ಜನ್ಮ ಹೊತ್ತು ತಿರುಗಿದರು
ಸವೆಯದ ಪಾಪದ ಹೊರೆಯನ್ನ
ಹರಿವ ಹೊಳೆಯಲ್ಲಿ
ತೊಳೆಯಲು ತವಕಿಸುತ್ತಾ
ನೊಂದವರಿಗೆ ನೆರವಾಗುವುದನ್ನೆ
ಮರೆತ ನಾವು
ದೇವರ ಹೆಸರಲ್ಲಿ
ಕಿರೀಟ ಕಂಠೀಹಾರ ಮಾಡಿಸುತ್ತೇವೆ.

ಕಾಣದ ದೇವರಿಗಾಗಿ
ಮಂದಿರ, ಮಸೀದಿ, ಇಗರ್ಚಿಗಳನು
ಕೆಡವಿ ಕಟ್ಟುವ ಉನ್ಮಾದದಲ್ಲಿ
ನಮ್ಮ ಎದೆಗಳೇ ಕಲ್ಲಾಗುತ್ತಿವೆ
ನೆತ್ತರಿಗೆ ನೆತ್ತರೇ ಉತ್ತರವೆಂಬ
ಉನ್ಮತ್ತಿನಲ್ಲಿ ಕೊಲ್ಲುವ ನಾವು,
ದೇವರ ಹೆಸರಲ್ಲಿ
ಪ್ರೀತಿಸುವುದನ್ನೇ ಮರೆತಿದ್ದೇವೆ.


ಕವಿ : ಮೋದೂರು ತೇಜ , ಚಳ್ಳಕೆರೆ,
ಮೊ : 9945562909

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ಉದ್ಯೋಗದಲ್ಲಿ ತೊಂದರೆಗಳು ಕಾಣಲಿವೆ

ಈ ರಾಶಿಯವರ ಉದ್ಯೋಗದಲ್ಲಿ ತೊಂದರೆಗಳು ಕಾಣಲಿವೆ, ಈ ಪಂಚರಾಶಿಗಳ ಸಂಸಾರದಲ್ಲಿ ಅಲ್ಲೋಲಕಲ್ಲೋಲ! ಶನಿವಾರ ರಾಶಿ ಭವಿಷ್ಯ -ಸೆಪ್ಟೆಂಬರ್-21,2024 ಸೂರ್ಯೋದಯ: 06:08, ಸೂರ್ಯಾಸ್ತ : 06:09 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ

ಶ್ವಾಸ ಇರುವವರೆಗೂ ವಿಶ್ವಾಸ ಕಳೆದುಕೊಳ್ಳಬೇಡಿ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

    ಸುದ್ದಿಒನ್ : ಶ್ವಾಸ ಇರುವವರಿಗೂ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಮಾಲ್ಡೀವ್ಸ್ ದೇಶದ ವಿಲ್ಲಾ ನೌಟೀಕ ಪ್ಯಾರಡೇಸ್ ದ್ವೀಪದಲ್ಲಿ ಶುಕ್ರವಾರ ನಡೆದ ವಿಶ್ವ

ಡಿ.ಕೆಂಪಣ್ಣನವರು ತಮ್ಮ ಜೀವಿತಾವಧಿಯ ಕೊನೆಯವರೆಗೂ ಭ್ರಷ್ಠಾಚಾರದ ವಿರುದ್ಧ ಹೋರಾಡಿದರು : ಕೆ.ಮಲ್ಲೇಶಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರ ನಿಧನಕ್ಕೆ ಜಿಲ್ಲಾ ಗುತ್ತಿಗೆದಾರರ ಸಂಘದಿಂದ

error: Content is protected !!