ಮಗನ ಸಾವು ಪ್ರಕರಣ : ಪೊಲೀಸರ ಮೇಲೆ ಹರಿಹಾಯ್ದ ರೇಣುಕಾಚಾರ್ಯ..!

1 Min Read

 

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಅಣ್ಣನ ಮಗ ಚಂದ್ರಶೇಖರ್ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಪೊಲೀಸರ ತನಿಖೆ ವಿರುದ್ಧ ರೇಣುಕಾಚಾರ್ಯ ಗರಂ ಆಗಿದ್ದಾರೆ. ಪೊಲೀಸರ ಮೇಲೆ ವಿಶ್ವಾಸವೇ ಇಲ್ಲ ಎಂಬಂತೆ ಮಾತನಾಡಿದ್ದಾರೆ.

ಮಗನನ್ನು ಕಳೆದುಕೊಂಡು ಇಡೀ ಕುಟುಂಬ ದುಃಖದಲ್ಲಿದೆ. ಸಂಬಂಧಿಕರು, ಕಾರ್ಯಕರ್ತರೆಲ್ಲ ಸೇರಿ ಸಾಂತ್ವನ ಮಾಡುತ್ತಿದ್ದಾರೆ. ಚಂದ್ರಶೇಖರ್ ಸಾವು ಆಕ್ಸಿಡೆಂಟ್ ಅಲ್ಲ ಕೊಲೆ ಎಂದೇ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಮಾತನಾಡಿದ ಶಾಸಕ ರೇಣುಕಾಚಾರ್ಯ ಅವರು, ಹಿಂದಿನ ಸೀಟಿನಲ್ಲಿ ನನ್ನ ಮಗನ ಹೆಣ ಸಿಕ್ಕಿದೆ. ಮುಂದೆ ಕೂತು ಕಾರು ಓಡಿಸುತ್ತಿದ್ದವನು ಹಿಂದೆ ಬೀಳುವುದಕ್ಕೆ ಹೇಗೆ ಸಾಧ್ಯ..?

ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ. ಇಷ್ಟು ದೊಡ್ಡ ಘಟನೆ ನಡೆದರೂ ನೀವೂ ನಮ್ಮ ಮನೆಗೆ ಬಂದು ಏನಾದರೂ ವಿಚಾರಣೆ ನಡೆಸಿದ್ರಾ..? ನನ್ನ ಮಗನ ಸಾವಿನ ತನಿಖೆ ನಡೆಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ನಮ್ಮ ಕಾರ್ಯಕರ್ತರು ಮಗನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದರು. ಡ್ರೋನ್ ಕ್ಯಾಮೆರಾಗಳನ್ನು ತರಿಸಿ ಹುಡುಕಾಟ ನಡೆಸಿದರು. ಈಗ ಕ್ಷೇತ್ರದ ಜನ ಪ್ರಶ್ನೆ ಮಾಡುತ್ತಿದ್ದಾರೆ. ಶಾಸಕರ ಮಗನಿಗೆ ಹೀಗೆ ಆದ್ರೆ ಸಾಮಾನ್ಯ ಜನರ ಕಥೆ ಏನು ಎಂದು ಕಣ್ಣೀರು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *