ಸ್ವಾಮೀಜಿಗಳ ವಿಚಾರ ಎಳೆದು ತರಬಾರದಿತ್ತು : ಸಿದ್ದರಾಮಯ್ಯ ಬಗ್ಗೆ ಕೆಲ ನಾಯಕರ ಬೇಸರ..!

suddionenews
1 Min Read

ಹಿಜಾಬ್ ವಿಚಾರ ಇನ್ನು ತಣ್ಣಗಾದಂತಿಲ್ಲ. ಈ ವಿಚಾರ ಸಂಬಂಧ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೊಸ ವಿವಾದವನ್ನ ಹುಟ್ಟು ಹಾಕಿದ್ದರು. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ್ದ ಅವರು, ಹಿಜಾಬ್ ವಿವಾದ ಹುಟ್ಟು ಹಾಕಿದ್ದೆ ಬಿಜೆಪಿಗರು. ಮುಸ್ಲಿಂ ಹೆಣ್ಣು ಮಕ್ಕಳು ದುಪ್ಪಟ್ಟ ಹಾಕಿಕೊಳ್ಳುತ್ತೇನೆ ಎಂದರೆ ಅದರಲ್ಲಿ ತಪ್ಪೇನಿದೆ..?

ಯಾಕೆ ಹಿಂದೂ ಹೆಣ್ಣು‌ ಮಕ್ಕಳು ದುಪ್ಪಟ್ಟ ಹಾಕಿಕೊಳ್ಳುವುದಿಲ್ಲವಾ..? ಯಾಕೆ ಸ್ವಾಮೀಜಿಗಳು ತಲೆ ಮೇಲೆ ಖಾವಿ ಧರಿಸಲ್ಲವಾ. ದುಪ್ಪಟ್ಟವನ್ನಾ ಯಾರು ಹೇಗೆ ಬೇಕಾದರೂ ಹಾಕಿಕೊಳ್ಳಲಿ ಎಂದಿದ್ದರು. ಈ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.

ಈ ಸಂಬಂಧ ಇದೀಗ ಸಿದ್ದರಾಮಯ್ಯ ಹೇಳಿಕೆಗೆ ಕೆಲವರು ಪ್ರತಿಕ್ರಿಯೆ ನೀಡಲು ನಕಾರ ಮಾಡುತ್ತಿದ್ದು, ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ನಾಯಕರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸ್ವಾಮೀಜಿಗಳ ಉದಾಹರಣೆಯನ್ನು ನೀಡಬಾರದಿತ್ತು. ಈ ವಿಚಾರ ಸದ್ಯಕ್ಕೆ ಅನಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಸಿದ್ದರಾಮಯ್ಯ ಅವರ ಹೇಳಿಕೆಗೆ ಕೆಲ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *