ಹಾವಿನ ತಜ್ಞರೇ ಆದರೂ ಎಚ್ಚರವಿರಲಿ : ಶಿವಮೊಗ್ಗದಲ್ಲಿ ಹಾವಿಗೆ ಮುತ್ತಿಡಲು ಹೋಗಿ ಆಗಿದ್ದೇನು ಗೊತ್ತಾ..?

suddionenews
1 Min Read

 

ಶಿವಮೊಗ್ಗ: ಹಾವಿನ ಬಗ್ಗೆ ಅರಿತವರು, ಹಾವಿನ ತಜ್ಞರು ಅಂತ ಎನಿಸಿಕೊಂಡವರು ಹಾವಿನ ಜೊತೆ ಸಲಿಗೆಯಿಂದ ನಡೆದುಕೊಳ್ಳುವುದು ಸ್ವಲ್ಪ ಡೇಂಜರ್. ಮೊದಲು ಅದನ್ನು ಬಿಡಬೇಕು. ಹಾವಿನ ಬಗ್ಗೆ ಎಲ್ಲಾ ಗೊತ್ತಿದೆ ಅಂತ ಹೋದವರು ಅದಕ್ಕೆ ಬಲಿಯಾಗಿದ್ದಾರೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಶಿವಮೊಗ್ಗದಲ್ಲಿ ನಡೆದ ಒಂದು ಘಟನೆ.

ಉರಗ ತಜ್ಞ ಅಲೆಕ್ಸ್ ಎಂಬಾತ ಹಾವಿಗೆ ಮುತ್ತಿಡಲು ಹೋಗಿ ಅದರಿಂದ ತುಟಿಗೆ ಕಚ್ಚಿಸಿಕೊಂಡಿರುವ ಘಟನೆ, ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿ ನಿನ್ನೆ ನಡೆದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತಿದೆ. ಅಲೆಕ್ಸ್ ಮಾಡಿಕೊಂಡ ಸಣ್ಣ ಯಡವಟ್ಟಿನಿಂದಾಗಿ ಸ್ವಲ್ಪ ಯಾಮಾರಿದ್ದರು ಪ್ರಾಣವೇ ಹಾರಿ ಹೋಗುತ್ತಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿಯಾಗಿಲ್ಲ.

ಅಲೆಕ್ಸ್ ಜಿಲ್ಲೆಯಲ್ಲಿ ಹಾವುಗಳನ್ನು ಹಿಡಿಯುವುದರಲ್ಲಿ ಪರಿಣಿತರಾಗಿದ್ದರು. ಹಾವುಗಳು ಕಂಡರೆ ಅವರನ್ನೇ ಕರೆಸುತ್ತಿದ್ದರು. ನಿನ್ನೆಯೂ ಕೂಡ ನಾಗರ ಹಾವನ್ನು ಹಿಡಿದ ಜೋಶ್ ನಲ್ಲಿ, ಹಾವಿಗೆ ಮುತ್ತಿಲು ಹೋಗಿದ್ದಾರೆ. ಈ ವೇಳೆ ಹಾವು ಅಲಕ್ಸ್ ಅವರಿಗೆ ಕಚ್ಚಿದೆ. ಸದ್ಯ ಚಿಕಿತ್ಸೆ ಪಡೆದಿರುವ ಅಲೆಕ್ಸ್ ಆರೋಗ್ಯದಿಂದ ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *