SC/ST ಸಮುದಾಯದವರಿಗೆ ಇನ್ಮುಂದೆ ಸೈಟ್ ವಿತರಣೆ : ಸತೀಶ್ ಜಾರಕಿಹೊಳಿ ಘೋಷಣೆ

1 Min Read

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಚಿವ ಸತೀಶ್ ಜಾರಕಿಹೊಳಿ ಒಂದು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಎಸ್ಸಿ/ಎಸ್ಟಿ ಸಮುದಾಯಕ್ಕೆ ಸಂಬಂಧಿಸಿದ ಘೋಷಣೆ ಇದಾಗಿದೆ. ಗುಡ್ ನ್ಯೂಸ್ ಕೂಡ ಸಿಕ್ಕಂತಾಗಿದೆ. ಇಷ್ಟು ದಿನ ಎಸ್ಸಿ/ಎಸ್ಟಿ ಸಮುದಾಯಕ್ಕೆ ಭೂಮಿಯನ್ನ ನೀಡಲಾಗುತ್ತಿತ್ತು, ಇದೀಗ ಸೈಟ್ ಗಳನ್ನ ನೀಡಲಾಗುತ್ತದೆ.

ಈ ಬಗ್ಗೆ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದರು. ಎಸ್ಸಿ/ಎಸ್ಟಿ ಸಮುದಾಯದವರಿಗೆ ಸೈಟ್ ನೀಡಲಾಗುವುದು ಎಂದಿದ್ದಾರೆ. ಸಮಾಜ ಕಲ್ಯಾಣೆ ಇಲಾಖೆಯಿಂದ ಎಸ್ಸಿ, ಎಸ್ಟಿ ಸಮುದಾಯದವರಿಗೆ ವಿಶೇಷ ಅನುದಾನ ನೀಡಿದ್ದು, ಭೂಮಿ ಖರೀದಿ ಮಾಡಿ ಸೈಟ್ ನೀಡಲು ಹಣ ಕೊಟ್ಟಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಬೇಕಿದೆ. ಒಂದು ವೇಳೆ ಸಿಎಂ ಅನುಮೋದನೆ ಕೊಟ್ಟರೆ ಸಮುದಾಯದ ಜನರಿಗೆ 30*40 ಸೈಟ್ ನೀಡಲಾಗುವುದು ಎಂಬ ಮಾಹಿತಿ ನೀಡಿದ್ದಾರೆ.

Share This Article
Enable Notifications OK No thanks