ಇತಿಮಿತಿಯಲ್ಲಿ ಗಣೇಶೋತ್ಸವ ಆಚರಿಸಿ; ಎ.ನಾರಾಯಣಸ್ವಾಮಿ

suddionenews
1 Min Read

ಚಿತ್ರದುರ್ಗ : ಗಣೇಶೋತ್ಸವ ಆಚರಣೆ ವಿಚಾರದಲ್ಲಿ ಸರ್ಕಾರದ ನಿಯಮ ಪಾಲಿಸುವ ಜೊತೆಗೆ ನಮ್ಮ ಧರ್ಮವನ್ನು ರಕ್ಷಣೆ ಮಾಡಬೇಕು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಕೋವಿಡ್ ನಿಯಂತ್ರಣ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಹಿಂದೂಪರ ಸಂಘಟನೆಗಳು ಹಬ್ಬವನ್ನು ವಿಜೃಂಭಣೆಯಿಂದ ಮಾಡಬೇಕು ಎಂದು ಕೊಂಡಿದ್ದಾರೆ. ಆದರೆ ಈ ಸಂದರ್ಭ ವ್ಯಕ್ತಿ ಹಾಗೂ ಧಾರ್ಮಿಕ‌ ವಿಚಾರ ಅಲ್ಲ . ಆದ್ದರಿಂದ ಇತಿಮಿತಿಯೊಂದಿಗೆ ಆಚರಣೆಗಳನ್ನು ಮಾಡಿಕೊಳ್ಳಬೇಕು ಎಂದರು.

ಹಬ್ಬದ ಸಂಭ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಪುನಃ ದೇಶಕ್ಕೆ ಹಾಗೂ ರಾಜ್ಯಕ್ಕೆ ಮತ್ತೊಂದು ಕೋವಿಡ್ ನೀಡಬಾರದು. ಇಲ್ಲಿ ಸರಿ ತಪ್ಪು ಎಂದು ಮಾತನಾಡುವ ಬದಲು ಕೋವಿಡ್ ನಿಂದ ರಕ್ಷಣೆಗೆ ಯೋಚಿಸಬೇಕು ಎಂದರು.

ಈಗಾಗಲೇ ಕೇರಳ, ಮಹಾರಾಷ್ಟ್ರದಲ್ಲಿ ಆಗುತ್ತಿರುವ ಅನಾಹುತ ನೋಡಿದರೆ ಅಪಾಯ ಸಮೀಪದಲ್ಲಿದೆ ಎನಿಸುತ್ತದೆ. ಆದರೆ ಪ್ರಕರಣಗಳು ರಾಜ್ಯದಲ್ಲಿ ಕಡಿಮೆ ಆಗುತ್ತಿವೆ. ಏನೇ ಆದರೂ ನಾವು ಎಚ್ಚರಿಕೆಯಲ್ಲಿ ಇರಬೇಕು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *