Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಓಂ ನಮಃ ಶಿವಾಯ ಮಂತ್ರದ ಮಹತ್ವ : ಧರ್ಮ–ಸಂಸ್ಕೃತಿ ಕುರಿತು ನಿರಂಜನ ದೇವರಮನೆ ಉಪನ್ಯಾಸ

---Advertisement---

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 12 :
ಪಂಚಾಕ್ಷರಿ ಮಂತ್ರವಾದ “ಓಂ ನಮಃ ಶಿವಾಯ” ಇದು ಶಿವನಿಗೆ ನಮಸ್ಕಾರ ಎಂದಾಗಿದ್ದು, ಇದೊಂದು ಶಕ್ತಿ ಮಂತ್ರ, ದಿವ್ಯ ಮಂತ್ರ ಹಾಗೂ ಪಾಪ ಪರಿಹಾರ ಮಂತ್ರವಾಗಿದೆ ಎಂದು ನಿರಂಜನ ದೇವರಮನೆ ಅವರು ಹೇಳಿದರು.

 

ಅವರು ಶನಿವಾರ ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ನಡೆದ ಸಮೃದ್ಧಿ ಮಹಿಳಾ ಸಂಸ್ಥೆಯ 8ನೇ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಆಚಾರವೇ ಸ್ವರ್ಗ ಅನಾಚಾರವೇ ನರಕ, ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾ ಪಂಚಾಕ್ಷರಿ ಮಂತ್ರ ಹಾಗೂ ರುದ್ರಾಕ್ಷಿ ಧಾರಣೆಯ ಮಹತ್ವದ ಕುರಿತು ಹಿತನುಡಿಗಳನ್ನು ಆಡಿದರು.

ಮತ್ತೋರ್ವ ಅತಿಥಿ ಯೋಗ ಗುರು ಶ್ರೀ ಚಿನ್ಮಯಾನಂದ ಗುರೂಜಿ ಅವರು “ಅಕಾರ ಉಕಾರ ಮಕಾರ” ಮೂರು ಅಕ್ಷರಗಳಿರುವ ಓಂ ಮಂತ್ರದ ಜಪದಿಂದ ಎಷ್ಟು ಶಕ್ತಿ ಸಿಗುತ್ತದೆ ಮತ್ತು ಆ ಮಂತ್ರದಿಂದ ಆಗುವ ಲಾಭದ ಬಗ್ಗೆ ತಿಳಿಸಿಕೊಟ್ಟರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸುನಿತಾ ಮಲ್ಲಿಕಾರ್ಜುನ್ ವಹಿಸಿದ್ದು, ಶ್ರೀಮತಿ ಕೆ ಸಿ ವೀಣಾ ಸುರೇಶ್, ಶ್ರೀಮತಿ ಜಯಶೀಲ, ಶ್ರೀಮತಿ ಮಾಂತಮ್ಮ, ಶ್ರೀಮತಿ ಪುಷ್ಪಲತಾ, ಶ್ರೀಮತಿ ಶಾಲಿನಿ, ಶ್ರೀಮತಿ ವಿಶಾಲ ನಂದೀಶ್, ಶ್ರೀಮತಿ ನಳಿನಿ ವಿರೂಪಾಕ್ಷಪ್ಪ ಉಪಸ್ಥಿತರಿದ್ದರು. ಶ್ರೀಮತಿ ಲಲಿತಾ ಎಸ್ ಹಿರೇಮಠ ಕಾರ್ಯಕ್ರಮದ ನಿರೂಪಣೆ ವಹಿಸಿದ್ದರು. ಪ್ರಾರ್ಥನೆ ಶ್ರೀಮತಿ ವಿಶಾಲ, ಸ್ವಾಗತ ಶ್ರೀಮತಿ ಮಹಾಂತಮ್ಮ ಹಾಗೂ ವಂದನಾರ್ಪಣೆ ಶ್ರೀಮತಿ ಕೆ ಸಿ ವೀಣಾ ಸುರೇಶ್ ಅವರಿಂದ ನಡೆಯಿತು. ಸಮೃದ್ಧಿ ಮಹಿಳಾ ಸಂಸ್ಥೆಯ ಸರ್ವ ಸದಸ್ಯರುಗಳು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...