ಐದು ಪೈಸೆ ತೆಗೆದುಕೊಂಡಿದ್ದಾನೆ ಅಂತ ಒಬ್ಬ ಕಾಂಟ್ರಾಕ್ಟರ್ ಹೇಳಿದ್ರು ರಾಜಕೀಯ ನಿವೃತ್ತಿ ಪಡಿತೀನಿ : ಸಿದ್ದರಾಮಯ್ಯ

suddionenews
1 Min Read

ಬಾಗಲಕೋಟೆ: ಪರಿಷತ್ ಚುನಾವಣಾ ಪ್ರಚಾರ ಜೋರಾಗಿ‌ ನಡೆಯುತ್ತಿದೆ. ಬದಾಮಿ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಸುನೀಲ್ ಗೌಡ ಪಾಟೀಲ್ ಪರ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದು, ಆ ಬಳಿಕ ಜೆಡಿಎಸ್, ಬಿಜೆಪಿ, ಆರ್ಎಸ್ಎಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಐದು ವರ್ಷ ಸಿಎಂ ಆಗಿದ್ದೀನಿ, ಹನ್ನೆರಡು ವರ್ಷ ಹಣಕಾಸು ಸಚಿವನಾಗಿ, 13 ಬಜೆಟ್ ಮಂಡಿಸಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ಯಾವಾನಾದ್ರೂ ಒಬ್ಬ ಕಾಂಟ್ರಾಕ್ಟರ್ ಸಿದ್ದರಾಮಯ್ಯ ಲಂಚ ಕೇಳಿದ್ದಾರೆ ಅಂತ ಹೇಳಲಿ. ಎನ್ಓಸಿ ಕೊಡಲು ಐದು ಪೈಸೆ ಕೇಳಿದ್ದೇನೆ ಅಂತ ಯಾರಾದ್ರೂ ಹೇಳಲಿ ಅಂದೇ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ.

ಇನ್ನು ಇದೆ ವೇಳೆ ಬಿಜೆಪಿಯವರು ನಾಚಿಗೆ ಇಲ್ಲದವರು. ಅವರಿಗೆ ಒಂದು ವೋಟು ಹಾಕಬೇಡಿ. ಜಿಗಜಿಣಗಿ, ಕಾರಜೋಳ ಇವರೆಲ್ಲಾ ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಹರಿಹಾಯ್ದರು. ಒಂದು ಕಡೆ ಜೆಡಿಎಸ್ ಮತ್ತೊ.ಮದು ಕಡೆ ಬಿಜೆಪಿ ಅದರ ಜೊತೆಗೆ ಆರದ ಎಸ್ ಎಸ್ ಮೂರು ಸೇರಿ ಹೊಡೆತ ಕೊಡುತ್ತಿವೆ. ನೀವೆ ನನ್ನನ್ನ ಕಾಪಾಡಬೇಕು. ರಕ್ಷಣೆ ಕೊಡ್ತೀರಾ ಅಲ್ವಾ ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *