ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತ ಹೇಳಿ ಸರ್ವನಾಶ್ ಆಗಿದೆ : ಸಿದ್ದರಾಮಯ್ಯ ಆಕ್ರೋಶ

1 Min Read

 

ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಮೇಲೆ ಕೆಂಡಕಾರಿದ್ದಾರೆ.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತ ಹೇಳುತ್ತಾರೆ. ಆದ್ರೆ ಸಬ್ ಕಾ ಸಾಥ್ ಸಬ್ ಕಾ ಸರ್ವನಾಶ್ ಆಗಿದೆ ಅಷ್ಟೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ ಕೂಡಲೇ ಮಧ್ಯೆ ಪ್ರವೇಶಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, 1970ರಲ್ಲಿ ಗರೀಬಿ ಹಠಾವೋ ಅಂದಿದ್ರಿ, ಏನು ಆಗಲಿಲ್ಲ. ಸಾಲ ಹೆಚ್ಚಾಗೋದಕ್ಕೆ ಕಾಂಗ್ರೆಸ್ಸೇ ಕಾರಣ ಎಂದರು.

ಅಣೆಕಟ್ಟು ಕಟ್ಟಿದ್ದು, ಕಟ್ಟಡ ಕಟ್ಟಿದ್ದು ಕಾಂಗ್ರೆಸ್. ಆದ್ರೆ ಲೂಟಿ ಮಾಡಿದ್ದು ಮಾತ್ರ ನಿಮ್ಮ ಸಾಧನೆ. ಎಲ್ಲಾ ಖಾಸಗೀಕರಣ ಮಾಡಿ ಸರ್ವನಾಶ ಮಾಡ್ತಾ ಇದ್ದೀರಿ ಎಂದು ಸಿದ್ದರಾಮಯ್ಯ ಮತ್ರೆ ಟಾಂಗ್ ಕೊಟ್ಟರು. ಇದಕ್ಕೆ ಸಿಎಂ ಬೊಮ್ಮಾಯಿ ಅವರು ಎಲ್ಲವೂ ನಿಮ್ಮ‌ ಕಾಲದಲ್ಲೇ ಆಗಿದ್ದು ಎಂದಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡುತ್ತ ಸಿದ್ದರಾಮಯ್ಯ ಅವರು ಸಂಸದರ ಮೇಲೆ ಕಿಡಿಕಾರಿದರು. ರಾಜ್ಯದಲ್ಲಿ 25 ಸಂಸದರು ಆಯ್ಕೆಯಾಗಿದ್ದೀರಿ. ಕೇಂದ್ರದ ಮೇಲೆ ಎಂದಾದರೂ ಒತ್ತಡ ತಂದಿದ್ದೀರಾ..?. ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಅನ್ಯಾಯವಾಗ್ತಿದೆ ಗೊತ್ತಾ..?. ನಾನೀದ್ದಾಗ ವಿತ್ತೀಯ ಕೊರತೆ ನಿರ್ವಹಣೆ ಮಾಡಿದ್ದೆ. ಆದರೆ ನೀವೂ ಬಂದ ಮೇಲೆ ಸಾಲದ ಪ್ರಮಾಣ ಹೆಚ್ಚಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ನೆರವು ಬರುತ್ತಿಲ್ಲ. ಕೇಂದ್ರ ಸರ್ಕಾರದಿಂದ ನೆರವು ಕೇಳುವ ಶಕ್ತಿಯೂ ನಿಮಗಿಲ್ಲ ಎಂದು ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *